Advertisement

ಪರ್ರಿಕರ್‌ ವಿರುದ್ಧ ಶಿವಸೇನೆ ಗರಂ

06:40 AM Jan 06, 2018 | Team Udayavani |

ಪಣಜಿ: “ಮಹದಾಯಿ ನದಿ ನೀರು ಕರ್ನಾಟಕಕ್ಕೆ ನೀಡುವುದು ಅನಿವಾರ್ಯ’ ಎಂದು ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಹೇಳಿಕೆ ನೀಡುತ್ತಿರುವುದನ್ನು ನೋಡಿದರೆ ಗೋವಾದಿಂದ ಮಹದಾಯಿ ಮುಕ್ತಗೊಳಿಸಲು ಬಿಜೆಪಿ ಪಣ ತೊಟ್ಟಂತೆ ಕಂಡುಬರುತ್ತಿದೆ ಎಂದು ಗೋವಾ ಶಿವಸೇನೆ ಉಪಾಧ್ಯಕ್ಷೆ ರಾಖೀ ಪ್ರಭುದೇಸಾಯಿ ಹೇಳಿದರು.

Advertisement

ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ಉಳಿವಿಗಾಗಿ ಶಿವಸೇನೆ ವತಿಯಿಂದ ಗೋವಾದಲ್ಲಿ ಆಂದೋಲನ ನಡೆಸಲಾಗುವುದು. ಮಹದಾಯಿ ಪ್ರಕರಣದಲ್ಲಿ ಗೋವಾದ ಹಿತ ಕಾಪಾಡಲಾಗುವುದು ಎಂದು ಮುಖ್ಯಮಂತ್ರಿ ಪರ್ರಿಕರ್‌ ಕಳೆದ ಮಂತ್ರಿಮಂಡಳ ಬೈಠಕ್‌ನಲ್ಲಿ ಸ್ಪಷ್ಟಪಡಿಸಿದ್ದರು. ಆದರೆ ಈಗ ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ನೀಡುವುದು ಅನಿವಾರ್ಯ ಎಂದು ಹೇಳುತ್ತಿದ್ದಾರೆ. ಮಹದಾಯಿ ನದಿ ನೀರನ್ನು ಉಳಿಸಿಕೊಳ್ಳಲು ನ್ಯಾಯಾಧಿಕರಣದೆದುರು ಹೋರಾಟ ನಡೆಸುತ್ತಿರುವಾಗ ಗೋವಾ ಮುಖ್ಯಮಂತ್ರಿಗಳ ಈ ವಿಧಾನ ಯೋಗ್ಯವಲ್ಲ. ಗೋವಾದ ಶೇ.80ರಷ್ಟು ಜನತೆ ಮಹದಾಯಿ ನದಿ ನೀರನ್ನೇ ಅವಲಂಬಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಕರ್ನಾಟಕಕ್ಕೆ ನೀರು ಕೊಡುವ ವಿಷಯವೇ ಬರುವುದಿಲ್ಲ ಎಂದರು.
 

Advertisement

Udayavani is now on Telegram. Click here to join our channel and stay updated with the latest news.

Next