Advertisement

ಶಿರ್ವ :ವಿದ್ಯುತ್‌ ಕಂಬ ದುರಸ್ತಿ ವೇಳೆ ಕಾರು ಢಿಕ್ಕಿ, ನಾಲ್ವರು ಕಾರ್ಮಿಕರಿಗೆ ಗಾಯ

11:58 AM Sep 13, 2022 | Team Udayavani |

ಶಿರ್ವ : ಇಲ್ಲಿನ ಕಟಪಾಡಿ ಶಿರ್ವ ಬೆಳ್ಮಣ್‌ ಮುಖ್ಯರಸ್ತೆಯ ವಿದ್ಯಾ ಲೇಔಟ್‌ ಬಳಿ ವಿದ್ಯುತ್‌ ಟ್ರಾನ್ಸ್‌ಫೋರ್ಮರ್‌ ಅಳವಡಿಸಲು ಮೆಸ್ಕಾಂ ಗುತ್ತಿಗೆ ಕಾರ್ಮಿಕರು ಕಂಬ ಹೊತ್ತೊಯ್ಯುತ್ತಿದ್ದ ಕಾರೊಂದು ಗುದ್ದಿ ನಾಲ್ವರು ಕಾರ್ಮಿಕರು ಗಾಯಗೊಂಡ ಘಟನೆ ಶಿರ್ವ ನ್ಯಾರ್ಮ ಸೇತುವೆಯ ಬಳಿ ಮಂಗಳವಾರ ಬೆಳಿಗ್ಗೆ ನಡೆದಿದೆ.

Advertisement

ನ್ಯಾರ್ಮ ಸೇತುವೆ ಬಳಿ ರಸ್ತೆ ಬಂದ್‌ ಮಾಡಿ ಕಾರ್ಮಿಕರು ವಾಹನದಿಂದ ಕಂಬವನ್ನು ಇಳಿಸಿ ವಿದ್ಯಾ ಲೇಔಟ್‌ ಬಳಿ ಹೋಗಲು ಕಂಬ ಹೊತ್ತೊಯ್ಯುತ್ತಿದ್ದ ವೇಳೆ ನೇರವಾಗಿ ಬಂದ ಕಾರೊಂದು ಮೆಸ್ಕಾಂ ಸಿಬಂದಿ ಕಾರು ನಿಲ್ಲಿಸಲು ಸೂಚನೆ ನೀಡಿದರೂ ಲೆಕ್ಕಿಸದೆ ಮುನ್ನುಗ್ಗಿದ್ದು, ಈ ವೇಳೆ ಕಾರು ಕಂಬಕ್ಕೆ ಢಿಕ್ಕಿ ಹೊಡೆದು ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ. ವಿದ್ಯುತ್‌ ಕಂಬ ಕಾರಿನ ಮೇಲೆ ಬಿದ್ದುದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

ಗಾಯಗೊಂಡ ಕಾರ್ಮಿಕರನ್ನು ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : ಕತ್ತಲಸಾರ್: ತೇಲಿ ಬಂದ ತ್ಯಾಜ್ಯ ರಾಶಿ; ಗ್ರಾ.ಪಂ.ನಿಂದ ದೂರು ದಾಖಲು

Advertisement

Udayavani is now on Telegram. Click here to join our channel and stay updated with the latest news.

Next