Advertisement

ಶಿರ್ವ: ಮನೆಗೆ ನುಗ್ಗಿ ಹಲ್ಲೆ, ಹಾನಿ;ಮೂವರ ವಿರುದ್ಧ ಪ್ರಕರಣ ದಾಖಲು  

04:55 PM Aug 17, 2022 | Team Udayavani |

ಶಿರ್ವ: ಬಾಡಿಗೆ ಮನೆಯೊಂದಕ್ಕೆ ಮನೆಗೆ ನುಗ್ಗಿ ಆವಾಚ್ಯ ಶಬ್ದದಲ್ಲಿ ಬೈದು, ಕಲ್ಲು ಎಸೆದು ಹಾನಿ ಮಾಡಿರುವ ಘಟನೆ ಕಾಪು ತಾಲೂಕಿನ ಪಾದೂರು ಗ್ರಾಮದ  ಕೊಲ್ಲಬೆಟ್ಟು ಎಂಬಲ್ಲಿ ಮಂಗಳವಾರ (ಆ.16 ರಂದು) ಮಧ್ಯಾಹ್ನ ನಡೆದಿದೆ.

Advertisement

ವಿನೋದ್‌ ಕುಮಾರ್‌ ಅವರ ಬಾಡಿಗೆ ಮನೆಗೆ  ಏಕಾಏಕಿ ನುಗ್ಗಿದ ಮೂವರು, ವಿನೋದ್‌ ಕುಮಾರ್‌ ಅವರಿಗೆ ಹೆಲ್ಮೆಟ್‌ ನಿಂದ ಕೆನ್ನೆಗೆ ಹೊಡೆದು ಹಲ್ಲೆ ಮಾಡಿದ್ದಾರೆ. ನಂತರ ಮೂವರು ಮನೆಗೆ ಹಾನಿ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ, ವಿನೋದ್‌ ಕುಮಾರ್‌  ಐವನ್‌ ಪಿಂಟೋ, ರೊನಾಲ್ಡ್‌ ಪಿಂಟೋ ಹಾಗೂ ಅನಿಲ್‌ ನಜರತ್‌ ವಿರುದ್ಧ ಕಿಟಕಿ ಗಾಜುಗಳನ್ನು, ಮನೆಯ ಬಾಗಿಲನ್ನು ಕಲ್ಲಿನಿಂದ ಹೊಡೆದು 15,000 ನಷ್ಟವನ್ನು ಮಾಡಿದ್ದಾರೆ. ಇದರೊಂದಿಗೆ ಬೈದು ಜೀವ ಬೆದರಿಕೆ ಹಾಕಿದ್ದಾರೆಂದು  ಶಿರ್ವ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next