Advertisement

ಶಿರ್ವ: ಬಚ್ಚಲು ಮನೆಗೆ ಬೆಂಕಿ…ಅಪಾರ ಹಾನಿ

07:33 PM Feb 07, 2023 | Team Udayavani |

ಶಿರ್ವ: ಇಲ್ಲಿನ ಗ್ರಾ.ಪಂ.ವ್ಯಾಪ್ತಿಯ ಪಂಜಿಮಾರು ಕೋಡುಗುಡ್ಡೆ ನಿವಾಸಿ ಲೀನಾ ಕುಟಿನ್ಹೊ ಅವರ ಬಚ್ಚಲು ಮನೆ ಸಹಿತ ಅಡುಗೆ ಕೋಣೆಗೆ ಮಂಗಳವಾರ ಸಂಜೆ ಬೆಂಕಿ ತಗಲಿ ಅಪಾರ ಹಾನಿ ಸಂಭವಿಸಿದೆ.

Advertisement

ಬಚ್ಚಲು ಮನೆಯಲ್ಲಿ ಹಾಕಿದ್ದ ಬೆಂಕಿ ಅಡುಗೆ ಕೋಣೆಗೂ ವ್ಯಾಪಿಸಿದ್ದು ಸಂಪೂರ್ಣ ಸುಟ್ಟುಹೋಗಿದೆ.ಬಚ್ಚಲುಮನೆಯಯಲ್ಲಿದ್ದ ತೆಂಗಿನಕಾಯಿ, ಕಟ್ಟಿಗೆ ಮತ್ತಿತರ ಸಾಮಾನು ಸರಂಜಾಮು ಸುಟ್ಟು ಕರಕಲಾಗಿದೆ.

ಅಡುಗೆ ಕೋಣೆಯಿಂದ ಮನೆಗೂ ಹಬ್ಬಿದ ಬೆಂಕಿಯ ಕೆನ್ನಾಲಗೆಯಿಂದ ಭಾಗಶ ಮನೆಗೂ ಹಾನಿ ಸಂಭವಿಸಿದೆ.

ಶಿರ್ವ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಆರ್.ಪಾಟ್ಕರ್ ಮತ್ತು ಸ್ಥಳೀಯರಾದ ಜೆಸಿಂತಾ, ವೈಲೆಟ್ ಕ್ಯಾಸ್ತಲಿನೊ, ಮಂಜುನಾಥ್ ಮತ್ತಿತರರು ಸೇರಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದರು. ಉಡುಪಿಯ ಅಗ್ನಿಶಾಮಕ ದಳದ ಅಧಿಕಾರಿ ಸತೀಶ್ .ಎನ್ ನೇತ್ರತ್ವದಲ್ಲಿ ಸಿಬ್ಬಂದಿ ಬೆಂಕಿಯನ್ನು ತಹಬಂದಿಗೆ ತರಲು ಯಶಸ್ವಿಯಾಗಿದ್ದಾರೆ. ಶಿರ್ವ ಪೊಲೀಸ್ ಠಾಣೆಯ ಎಎಸೈ ವಿವೇಕ್ ಮತ್ತು ಸಿಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next