Advertisement

Shirva ಬೈಕುಗಳ ಮುಖಾಮುಖಿ:ಓರ್ವ ಮೃತ್ಯು, ಇನ್ನೋರ್ವ ಗಂಭೀರ

10:22 PM Jun 08, 2023 | Team Udayavani |

ಶಿರ್ವ:ಶಂಕರಪುರ ಶಿರ್ವ ಮುಖ್ಯ ರಸ್ತೆ ಯ ದುರ್ಗಾನಗರ ಇಂಚರ ಬಸ್ಸು ನಿಲ್ದಾಣದ ಬಳಿ ಬೈಕುಗಳೆರಡು ಮುಖಾಮುಖಿ ಢಿಕ್ಕಿ ಹೊಡೆದು ಓರ್ವ ಮೃತ ಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜೂ.8 ರ ರಾತ್ರಿ 9 ಗಂಟೆಯ ವೇಳೆ ನಡೆದಿದೆ. ಶಂಕರಪುರ ದ ಶಂಕರ ಆಚಾರ್ಯ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

Advertisement

ಬಂಟಕಲ್ಲು ನಾಗರಿಕ ಸೇವಾ ಸಮಿತಿಯವರ ತುರ್ತು ವಾಹನದಲ್ಲಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪಾಂಬೂರಿನ ಕರುಣಾಕರ ಮೂಲ್ಯ ಗಾಯಳು ಎಂದು ತಿಳಿದು ಬಂದಿದೆ. ಶಿರ್ವ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next