Advertisement

ಬೈಂದೂರು ಸಹಕಾರಿ ಸಂಘದ ಶಿರೂರು ಕರಾವಳಿ ಶಾಖೆ ಬೀಗ ಮುರಿದು ಕಳ್ಳತನ

10:29 AM Jul 21, 2022 | Team Udayavani |

ಬೈಂದೂರು: ಇಲ್ಲಿನ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಕರಾವಳಿ ಶಾಖೆಯ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

Advertisement

ಶಾಖೆಯ ಹೊರಗಿನ ಗೇಟ್ ಹಾಗೂ ಶಟರ್ ಒಳಭಾಗವನ್ನು ಮುರಿದು ಒಳನುಗ್ಗಿದ ಕಳ್ಳರು ಕೌಂಟರ್ ಮುಂತಾದ ಹಣಕ್ಕಾಗಿ ಕಡೆ ಹುಡುಕಿದ್ದಾರೆ. ಕಳ್ಳತನವಾದ ಮೌಲ್ಯದ ನಿಖರ ಮಾಹಿತಿ ದೊರೆತಿಲ್ಲ.

ಇದನ್ನೂ ಓದಿ: ಪ್ರತಿಷ್ಠಿತ ಕೊರಿಯರ್‌ ಸಂಸ್ಥೆಗಳ ಹೆಸರು ಬಳಸಿ ಜನರಿಗೆ ಮೋಸ: ನಾಲ್ವರ ಬಂಧನ

ಘಟನೆ ಬೈಂದೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ತನಿಖೆ ನಡೆಸುತಿದ್ದಾರೆ. ಸ್ಥಳದಲ್ಲಿ ಕಳ್ಳತನಕ್ಕೆ ಬಳಸಿದ ವಸ್ತುಗಳು ಕಂಡುಬಂದಿದೆ ಎಂದು ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next