Advertisement

ಶಿರೂರು ಜಲಪ್ರಳಯ : 25ಕ್ಕೂ ಅಧಿಕ ಮನೆ ಮುಳುಗಡೆ, ಕೋಟ್ಯಾಂತರ ಮೌಲ್ಯದ ಆಸ್ತಿ ಪಾಸ್ತಿ ನಷ್ಟ

11:45 AM Aug 02, 2022 | Team Udayavani |

ಶಿರೂರು : ಮಂಗಳವಾರ ಮುಂಜಾನೆ ಬ್ರಹತ್ ಮೇಘಸ್ಪೋಟಕ್ಕೆ ಬಹುತೇಕ ಶಿರೂರು ಜಲಾವ್ರತಗೊಂಡಿದೆ.

Advertisement

ಕೊಟ್ಯಾಂತರ ರೂಪಾಯಿ ನಷ್ಡ.: ಒತ್ತಿನೆಣೆ ಪರಿಸರದಲ್ಲಿ ಮೇಘಸ್ಪೋಟಗೊಂಡ ಪರಿಣಾಮ ಚಿಲುಮೆ,ಪೇಟೆ ಮುಂತಾದ ನದಿ ತೊರೆಗಳು ತುಂಬಿ ಹರಿದಿದೆ.ಮಳೆಯ ಪರಿಣಾಮ ಹೊಳೆಗಳು ಕೂಡ ತುಂಬಿದ್ದು ಒಮ್ಮೆಲ್ಲೆ ನೀರು ಏರಿದ ಪರಿಣಾಮ ಪೇಟೆ, ಕೆಸರಕೋಡಿ, ಹಡವಿನಕೋಣೆ, ಕುಂಬಾರಕೇರಿ, ಪಡುವರಿ, ಬಹುತೇಖ ಭಾಗ ಜಲಾವ್ರತಗೊಂಡಿದೆ.

ನಿರೋಡಿಯಲ್ಲಿ ಎಂಟು ಹಸುಗಳು ನೀರುಪಾಲಾಗಿದೆ, ಎರಡು ಮನೆ ಕುಸಿತುವ ಬೀತಿ ಇದೆ, ಕುಂಬಾರಕೇರಿಯಲ್ಲಿ ಎರಡು ಮನೆ ಕುಸಿದಿದೆ, ಕಳುಹಿತ್ಲು ಇಪ್ಪತ್ತಕ್ಕೂ ಅಧಿಕ ದೋಣಿ ನಾಪತ್ತೆಯಾಗಿದೆ, ಹಡವಿನಕೋಣೆಯಲ್ಲಿ ಬಹುತೇಖ ದೋಣಿಯ ಹೊಸ ಬಲೆಗಳು ನದಿ ಪಾಲಾಗಿದೆ, ಇಪ್ಪತ್ತೈದಕ್ಕೂ ಅಧಿಕ ಮನೆ ಜಲಾವ್ರತಗೊಂಡಿದೆ.

ಅಗ್ನಿಶಾಮಕದಳದ ದೋಣಿ ಬಳಸಲಾಗಿದ್ದು. ಬಹುತೇಖ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದ್ದು ಮೂರು ಕಡೆ ಗಂಜಿ ಕೇಂದ್ರ ತೆರೆಯಲಾಗಿದೆ.

ಜಿಲ್ಲಾಧಿಕಾರಿ ಭೇಟಿ :

Advertisement

ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದು ತಕ್ಷಣದಿಂದ ಸುರಕ್ಷತಾ ಕ್ರಮ ಮತ್ತು ಮುಂಜಾಗ್ರತೆ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದು ಸಂತ್ರಸ್ಥರಿಗೆ ಜಿಲ್ಲಾಡಳಿತದಿಂದ ಸಹಾಯ ನೀಡುವ ಭರವಸೆ ನೀಡಿದ್ದಾರೆ.

ಈ ಸಂಧರ್ಭದಲ್ಲಿ ಮಾಜಿ ಶಾಸಕ ಕೇ.ಗೋಪಾಲ ಪೂಜಾರಿ, ಸಹಾಯಕ ನಿರ್ದೇಶಕ ಕೆ.ರಾಜು, ತಹಶೀಲ್ದಾರ್ ಕಿರಣ್ ಗೋರಯ್ಯ, ಜಿ.ಪಂ.ಮಾಜಿ ಅಧ್ಯಕ್ಷ ರಾಜು ಪೂಜಾರಿ, ಗ್ರಾ.ಪಂ.ಅಧ್ಯಕ್ಷೆ ದಿಲ್ ಶಾದ್ ಬೇಗಂ. ಉಪಾಧ್ಯಕ್ಷ ರವೀಂದ್ರ ಶೆಟ್ಟಿ ,ಗ್ರಾ.ಪಂ.ಸದಸ್ಯರು, ಆರಕ್ಷಕ ಇಲಾಖೆ, ಕಂದಾಯ ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ : ಗಂಗಾವತಿ: ನಾಟಿ ಮಾಡಿದ ಭತ್ತದ ಗದ್ದೆ ಮತ್ತು ಹೋಟೆಲ್ ರೆಸಾರ್ಟ್ ಗಳಿಗೆ ನುಗ್ಗಿದ ಮಳೆ ನೀರು

Advertisement

Udayavani is now on Telegram. Click here to join our channel and stay updated with the latest news.

Next