Advertisement

ಮಳೆಯ ಆರ್ಭಟ : ಕುಂದಾಪುರ, ಬೈಂದೂರು ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ

08:50 AM Aug 02, 2022 | Team Udayavani |

ಕುಂದಾಪುರ : ಭಾರಿ ಮಳೆಯ ಹಿನ್ನೆಲೆಯಲ್ಲಿ ಕುಂದಾಪುರ, ಬೈಂದೂರು ತಾಲೂಕು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಕುಂದಾಪುರ ಸಹಾಯಕ ಕಮಿಷನರ್ ಆದೇಶ ಹೊರಡಿಸಿದ್ದಾರೆ.

Advertisement

ಇದೆ ಮೊದಲ ಬಾರಿಗೆ ಶಿರೂರು ಭಾಗದಲ್ಲಿ ಜಲದಿಗ್ಬಂಧನ ಉಂಟಾಗಿದೆ. ಕೆಳಪೇಟೆ,ಕರಾವಳಿ ರಸ್ತೆ ಭಾಗಶಃ ಮುಳುಗಡೆ ಆಗಿದ್ದು ಬಹುತೇಕ ಮನೆಗಳು ಜಲಾವ್ರತಗೊಂಡಿದೆ.

ಕರಾವಳಿ ರಸ್ತೆ ನೀರು ತುಂಬಿ ಹರಿಯುತ್ತಿದೆ.ಪೇಟೆ ಹೊಳೆ ತುಂಬಿ ಹರಿಯುತಿದ್ದು ನದಿ ದಂಡೆಯ ಮನೆಗಳು ಮುಳುಗಡೆಗೊಂಡಿದೆ.ಸುಮಾರು ಹತ್ತಕ್ಕೂ ಅಧಿಕ ಮನೆ ಮುಳುಗಡೆ ಆಗಿದ್ದು ಅಗ್ನಿಶಾಮಕ ದಳ,ಸ್ಥಳೀಯರ ಸಹಕಾರದಿಂದ ಅಪಾಯದಲ್ಲಿದ್ದವರನ್ನು ರಕ್ಷಿಸಲಾಗಿದೆ.

ಮನೆಯಲ್ಲಿರುವ ಕಾರುಗಳು ನೀರಲ್ಲಿ ಮುಳುಗಿ ಹೋಗಿದ್ದು ಒಂದು ಬೈಕ್ ನದಿಯಲ್ಲಿ ಕೊಚ್ಚಿ ಹೋಗಿದೆ.ದನಕರುಗಳು ನದಿಯಲ್ಲಿ ತೇಲಿ ಹೋಗಿದೆ.ಮಳೆಯ ಪ್ರಮಾಣ ಏರುತಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ. ಸ್ಥಳದಲ್ಲಿ ಕಂದಾಯ ಇಲಾಖೆ,ಆರಕ್ಷಕ ಇಲಾಖೆ,ಅಗ್ನಿಶಾಮಕ,ಪಂಚಾಯತ್ ಸದಸ್ಯರು ಅಧಿಕಾರಿಗಳು ಹಾಜರಿದ್ದಾರೆ. ಸ್ಥಳೀಯ ಯುವಕರು ಇಲಾಖೆಯೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

1913 ರ ಬಳಿಕ ಇದೆ ಮೊದಲ ಬಾರಿಗೆ ಈ ರೀತಿಯ ಜಲ ಪ್ರಳಯ ಶಿರೂರಿನಲ್ಲಿ ಕಂಡು ಬಂದಿದೆ ಅನ್ನೋದು ಹಿರಿಯರ ಅಭಿಪ್ರಾಯವಾಗಿದೆ.

Advertisement

ಇದನ್ನೂ ಓದಿ : ಕಾಮನ್‌ವೆಲ್ತ್ ಗೇಮ್ಸ್‌ : ಕಂಚಿನ ಪದಕ ಗೆದ್ದ ವೇಟ್‌ಲಿಫ್ಟರ್ ʻಹರ್ಜಿಂದರ್ ಕೌರ್ʼ

 

Advertisement

Udayavani is now on Telegram. Click here to join our channel and stay updated with the latest news.

Next