Advertisement

ಶಿರಸಿ: ಗಾಂಜಾ ಮಾರಾಟ; ಇಬ್ಬರ ಬಂಧನ

10:19 AM Jul 29, 2022 | Team Udayavani |

ಶಿರಸಿ: ಗಾಂಜಾ ಮಾರಾಟ ಮಾಡಲು ಬಂದ ವ್ಯಕ್ತಿಗಳನ್ನು ಬಂಧಿಸಿದ ಘಟನೆ ನಗರದಲ್ಲಿ ನಡೆದಿದೆ.

Advertisement

ರಾಮ ನಗರ ನಿವಾಸಿ ನವೀನ ರಾಮಚಂದ್ರ ಚೌಹಾಣ (23)  ಗಣೇಶ ನಗರದ ನಿಖಿಲ್ ನಾಗೇಶ ಗೌಡ (27) ಬಂಧಿತ ಆರೋಪಿಗಳು.

ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯ ಆನೆಹೊಂಡ ಹತ್ತಿರ ಅರಣ್ಯ ಪ್ರದೇಶದ ಕಚ್ಚಾ ರಸ್ತೆಯ ಮೇಲೆ ಇಬ್ಬರು ವ್ಯಕ್ತಿಗಳು ಗಾಂಜಾ ಪದಾರ್ಥ ಮಾರಾಟಕ್ಕೆ ಬಂದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮೇಲಾಧಿಕಾರಿಗಳ ಅನುಮತಿ ಪಡೆದು ಶಿರಸಿ ಶಹರದ ಪೊಲೀಸರು ಕಾರ್ಯಾಚರಣೆ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿ, ಮಾರಾಟ ಮಾಡಲು ತಂದಿದ್ದ25 ಸಾ.ರೂ. ಮೌಲ್ಯದ 1 ಕೆ.ಜಿ. 54 ಗ್ರಾಂ ತೂಕದ ಗಾಂಜಾ ಪದಾರ್ಥ ಹಾಗೂ ನಗದು ಹಣ 800 ರೂ. ವಶಪಡಿಸಿಕೊಳ್ಳಲಾಗಿದೆ.

ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಪೊಲೀಸ್ ಉಪಾಧೀಕ್ಷಕ ರವಿ ಡಿ. ನಾಯ್ಕ, ಸಿಪಿಐ ರಾಮಚಂದ್ರ ನಾಯಕ ಮಾರ್ಗದರ್ಶನದಲ್ಲಿ ಪಿಎಸ್ಐ ರಾಜಕುಮಾರ ಎಸ್ ಉಕ್ಕಲಿ, ಪಿಎಸ್ಐ ರತ್ನಾ ಎಸ್. ಕೆ., ಎಎಸ್ಐ ಅಶೋಕ ಆರ್ ರಾಠೋಡ, ಸಿಬ್ಬಂದಿಗಳಾದ ವಿಶ್ವನಾಥ ಭಂಡಾರಿ, ಮಧುಕರ ಗಾಂವಕರ, ಶಿವು ಉಮ್ಮಚಗಿ, ನಾಗಪ್ಪ ಲಮಾಣಿ, ಪ್ರವೀಣ ಎನ್, ಅರುಣ ಲಮಾಣಿ, ರಾಜು ಸಾಲಗಾಂವಿ, ಸದ್ದಾಂ ಹುಸೇನ್, ಮಂಜುನಾಥ ಕಾಶಿಕೋವಿ, ಸಂತೋಷ ಕುಮಾರ ಆರ್.ಆರ್. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next