Advertisement

ಶಿರಸಿ: ಯಶಸ್ವಿಯಾಗಿ ನಡೆದ ಮಾಧ್ಯಮ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ

02:38 PM Oct 13, 2021 | Team Udayavani |

ಶಿರಸಿ: ತಾಲೂಕು‌ ಕಾರ್ಯನಿರತ ಪತ್ರಕರ್ತರ ‌ಸಂಘ ನೀಡುವ ಮಾಧ್ಯಮ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ನಡೆಯಿತು.

Advertisement

ಹಿರಿಯ ಪತ್ರಕರ್ತ ವಿರೂಪಾಕ್ಷ ಹೆಗಡೆ‌ ಕಂಚೀಕೈ ಅವರಿಗೆ ಮಾಧ್ಯಮ ಶ್ರೀ ಪ್ರಶಸ್ತಿಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸಿ ಮಾತನಾಡಿ, ಹಿರೇತನ ಗುರುತಿಸಿ ಪ್ರಶಸ್ತಿ ಕೊಡುವದು ಶ್ಲಾಘನೀಯ. ಕನ್ನಡ ಪತ್ರಿಕೋದ್ಯಮ ಅತ್ಯಂತ ಹಳೆಯ ಇತಿಹಾಸ ಇದೆ. ರಾಜ್ಯದಲ್ಲಿ ಪ್ರಭಾವಿಯಾಗಿ ಮಾಧ್ಯಮ ಕಾರ್ಯ ಮಾಡುತ್ತಿದೆ. ಅಜ್ಜಿಬಳ ಹೆಗಡೆ ಅವರು 48 ವರ್ಷಗಳ ಹಿಂದೆ ಪತ್ರಿಕಾ ಸಂಘ ಕಾರ್ಯ ಆರಂಭಿಸಿದ್ದರು. ಸಮಾಜದ ಆಗು ಹೋಗುಗಳಿಗೆ ತಿಳಿದುಕೊಳ್ಳಲು ಸಕ್ರೀಯವಾಗಿ ಪತ್ರಕರ್ತರು ತೊಡಗಿಕೊಳ್ಳಬೇಕು. ಪತ್ರಿಕೋದ್ಯಮದಲ್ಲಿ ತೊಡಗಿಕೊಳ್ಳಲು ಜಿಲ್ಲೆ ಪತ್ರಕರ್ತರನ್ನು ಸಿದ್ದಗೊಳಸಲಿಲು ತರಬೇತಿ‌ ಕೇಂದ್ರ. ಬಹಳ ದೊಡ್ಡ ಜವಬ್ದಾರಿ ನಿರ್ವಹಿಸುತ್ತಿದ್ದೇವೆ ಎಂಬುದನ್ನು ಪತ್ರಕರ್ತರು ಅರಿತು ನಡೆಯಡಬೇಕು. ಪತ್ರಿಕೋದ್ಯಮದಲ್ಲಿ ನಂಬಿಕೆ, ವಿಶ್ವಾಸ ಬೆಳಸಿಕೊಂಡು ನಡೆಯಬೇಕು ಎಂದರು.

ಪ್ರಶಸ್ತಿ ಸ್ವೀಕರಿಸಿದ ವಿರೂಪಾಕ್ಷ ಹೆಗಡೆ ಕಂಚೀಕೈ, ಧಾರವಾಡ ಹಾಲು‌ ಒಕ್ಕೂಟ ನಿರ್ದೇಶಕ ಸುರೇಶ್ಚಂದ್ರ ಹೆಗಡೆ‌ ಕೆಶಿನ್ಮನೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಜಿಲ್ಲಾ ಸಂಘದ ಅಧ್ಯಕ್ಷ ಆರ್.ಕೆ.ಭಟ್ಟ,  ಜಿಲ್ಲಾ ಉಪಾಧ್ಯಕ್ಷ ಪ್ರದೀಪ ಶೆಟ್ಟಿ, ತಾಲೂಕು ಸಂಘದ ಅಧ್ಯಕ್ಷ ಜೆ.ಆರ್.ಸಂತೋಷಕುಮಾರ ಇತರರು ಇದ್ದರು.

ಆಶಾ ಕೆರೆಗದ್ದೆ ಪ್ರಾರ್ಥಿಸುದರು. ಕೃಷ್ಣಮೂರ್ತಿ ಹೆಗಡೆ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಅಡಿ ಸನ್ಮಾನ ಪತ್ರ ವಾಚಿಸಿದರು.

ರಾಘವೇಂದ್ರ ಬೆಟ್ಟಕೊಪ್ಪ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಸಂದೇಶ ಭಟ್ಟ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next