Advertisement

ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ.. ಎಂಬಂತಾಗಿದೆ ಶಿರಗುಂಪಿ ಗ್ರಾ.ಪಂ. ಉದ್ಯೋಗ ಖಾತ್ರಿ ಯೋಜನೆ

04:49 PM May 18, 2022 | Team Udayavani |

ಕುಷ್ಟಗಿ : ಕುಷ್ಟಗಿ ತಾಲೂಕಿನ ಶಿರಗುಂಪಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಾಲಾದಲ್ಲಿ ಮುಳ್ಳುಗಂಟಿ ತೆರವು, ಹೂಳೆತ್ತುವ ಕೆಲಸದಲ್ಲಿ ಕೂಲಿಕಾರರಿಗೆ ಕುಡಿಯಲು ನೀರು, ನೆರಳಿನ ವ್ಯವಸ್ಥೆ ಇಲ್ಲದೇ ಎರಡು ದಿ‌ನ ಕೆಲಸ ನಡೆದಿದೆ ಎಂದು ಕರ್ನಾಟಕ ಪ್ರಾಂತ ಕೂಲಿಕಾರರ ಸಂಘದ ಅದ್ಯಕ್ಷ ಆರ್.ಕೆ.ದೇಸಾಯಿ ದೂರಿದ್ದಾರೆ.

Advertisement

ಶಿರಗುಂಪಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಉದ್ಯೋಗ ಖಾತ್ರಿ ಯೋಜನೆ ಕೆಲಸ ಆರಂಭಿಸಲಾಗಿದೆ. ಈ ಕೆಲಸ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎ‌ನ್ನುವಂತಾಗಿದೆ. 150 ಕ್ಕೂ ಅಧಿಕ ಕೂಲಿಕಾರರು ಇರುವ ಈ ಕೆಲಸದಲ್ಲಿ ಸರಿಯಾದ ಅಳತೆ ನೀಡದೇ ಕೆಲಸ ನಡೆಯುತ್ತಿದ್ದು ಸರ್ಕಾರದ ಹಣ ಲೂಟಿ ಮಾಡುವ ಸಾಧ್ಯತೆ ಇದೆ. ಈ ಕೆಲಸದಲ್ಲಿ ಯಾವುದೇ ಉದ್ಯೋಗ ಖಾತ್ರಿ ನಿಯಮ ಅನುಸರಿಸದೇ ಬೇಕಾಬಿಟ್ಟಿ ಕೆಲಸ ಮಾಡಲಾಗುತ್ತಿದೆ, ಸಿಇಓ ಗಮನಿಸಿ ಕ್ರಮ ಕೈಗೊಳ್ಳಬೇಕೆಂದು ಆರ್.ಕೆ.ದೇಸಾಯಿ ಒತ್ತಾಯಿಸಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಆಗುತ್ತಿರುವ ಮೋಸ ಖಂಡಿಸಿ ಕೆಲವೇ ದಿನಗಳಲ್ಲಿ ಜಿಲ್ಲೆಯ ತಾಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ಕೂಲಿಕಾರರು ಪಾದಯಾತ್ರೆ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದರು.

ಇದನ್ನೂ ಓದಿ : ಹೆಚ್.ಡಿ.ದೇವೇಗೌಡರ ಹುಟ್ಟುಹಬ್ಬ: ಅಪ್ಪಾಜಿ ಕ್ಯಾಂಟೀನ್ ಗೆ ನಿಖಿಲ್ ಭೇಟಿ

Advertisement

Udayavani is now on Telegram. Click here to join our channel and stay updated with the latest news.

Next