Advertisement

Nellyadi ಶಿರಾಡಿ: ಕಾಡಾನೆ ದಾಳಿ, ಕೃಷಿ ಹಾನಿ

11:09 PM Jun 18, 2024 | Team Udayavani |

ನೆಲ್ಯಾಡಿ: ಕಾಡಾನೆ ದಾಳಿ ನಡೆಸಿ ಕೃಷಿ ಹಾನಿಗೊಳಿಸಿರುವ ಘಟನೆ ಶಿರಾಡಿ ಗ್ರಾಮದಲ್ಲಿ ಜೂ.17ರಂದು ರಾತ್ರಿ ನಡೆದಿದೆ.

Advertisement

ಶಿರಾಡಿ ನಿವಾಸಿ ದಿವಾಕರ ಗೌಡ ಅವರ ತೋಟಕ್ಕೆ ನಾಲ್ಕರಿಂದ ಆರು ಆನೆಗಳು ದಾಳಿ ನಡೆಸಿವೆ ಎಂದು ಅಂದಾಜಿಸಲಾಗಿದ್ದು, ಅಡಿಕೆ, ತೆಂಗು, ಬಾಳೆ ಕೃಷಿಗಳನ್ನು ಹಾನಿಗೊಳಿಸಿವೆ. ತೋಟಕ್ಕೆ ಅಳವಡಿಸಿರುವ ಸ್ಪ್ರಿಂಕ್ಲರ್‌ಗಳನ್ನೂ ಕಾಡಾನೆಗಳು ಪುಡಿಗೈದಿವೆ. ಘಟನೆಯಿಂದಾಗಿ ದಿವಾಕರ ಗೌಡ ಅವರಿಗೆ ಸಾವಿರಾರು ರೂ. ನಷ್ಟ ಸಂಭವಿಸಿದೆ.

ಈ ಭಾಗದಲ್ಲಿ ಕಾಡಾನೆಗಳು ಪದೇಪದೆ ದಾಳಿ ನಡೆಸಿ ಕೃಷಿ ಹಾನಿಗೊಳಿಸುತ್ತಿರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕಾಡಾನೆಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬಾಂಜಾರು ಮಲೆ ತಲುಪಿದ ಒಂಟಿ ಸಲಗ
ಬೆಳ್ತಂಗಡಿ: ಎರಡು ಮೂರು ದಿನಗಳಿಂದ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಆಗಾಗ ಕಂಡುಬರುತ್ತಿದ್ದ, ಒಂಟಿ ಸಲಗ ಸೋಮವಾರ ಮುಂಜಾನೆ ಬಾಂಜಾರು ಮಲೆಯತ್ತ ಸಾಗಿದೆ. ಬಾಂಜಾರು ಗೆಸ್ಟ್‌ ಹೌಸ್‌ ಸಮೀಪ ತೆಂಗಿನ ಮರವನ್ನು ದೂಡಿ ಹಾಕಿದ ಸಲಗ, ಬಳಿಕ ಇಲ್ಲಿನ ರಬ್ಬರ್‌ ತೋಟದಲ್ಲಿ 8.30ರ ಸುಮಾರಿಗೆ ಕಾಣಿಸಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next