Advertisement

ಯುವಕರಿಂದ ದೇಶ ಬಲಿಷ್ಠ

06:26 PM Feb 10, 2020 | Naveen |

ಶಿವಮೊಗ್ಗ: ಯಾವುದೇ ದೇಶದ ಸಂಪತ್ತನ್ನು ದೃಢಪಡಿಸುವುದು ಹಣವಲ್ಲ. ಅದು ಮಾನವ ಸಂಪನ್ಮೂಲ. ಇಂತಹ ಮಾನವ ಸಂಪನ್ಮೂಲ ಸರಿದಾರಿಯಲ್ಲಿ ನಡೆದರೆ ದೇಶದ ಪ್ರಗತಿ ಸಾಧ್ಯ. ಯಾವುದೇ ಒಂದು ದೇಶ ಬಲಿಷ್ಠವಾಗಲು ಅಲ್ಲಿನ ಯುವಜನತೆಯ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದು ಮೇಯರ್‌ ಸುವರ್ಣ ಶಂಕರ್‌ ಹೇಳಿದರು.

Advertisement

ನಗರದ ನೆಹರು ಕ್ರೀಡಾಂಗದಲ್ಲಿ ಜಿಲ್ಲಾ ಆಡಳಿತ, ಜಿಪಂ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರದಲ್ಲಿ 2019-20 ನೇ ಸಾಲಿನ ಬೆಂಗಳೂರು ವಿಭಾಗ ಮಟ್ಟದ ಯುವಜನ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯುವಶಕ್ತಿ ನಿಂತ ನೀರಾಗಬಾರದು. ಅದು ಸದಾ ಜಾಗ್ರತೆ ವಹಿಸಿ ಸಂಚಲನತೆಯಿಂದ ಕೂಡುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಮಳೆಗಾಲದಲ್ಲಿ ಮಳೆ ನೀರನ್ನು ಸಂಗ್ರಹಿಸಿ ಉಪಯೋಗಿಸಿಕೊಳ್ಳುವಂತೆ ಯುವಶಕ್ತಿ ತಮ್ಮ ವಯಸ್ಸಿನಲ್ಲಿ ಹಿರಿಯರ ಮಾಗದರ್ಶನ ಪಡೆದು ಉತ್ತಮ ದೇಶ ಕಟ್ಟುವ ಸತ್ಪ್ರಜೆಗಳಾಗಬೇಕು ಎಂದು ಹೇಳಿದರು.

ಉಪ ಮಹಾ ಪೌರರಾದ ಸುರೇಖಾ ಮುರುಳಿಧರ್‌ ಮಾತನಾಡಿ, ಯುವಜನತೆಯಲ್ಲಿರುವ ಸುಪ್ತ ಕಲೆ ಪ್ರದರ್ಶನಕ್ಕೆ ಮೇಳ ಉತ್ತಮ ವೇದಿಕೆಯಾಗಿದೆ. ಈ ಮೂಲಕ ನಿರೀಕ್ಷಿತ ಯಶಸ್ಸು ಗಳಿಸಬಹುದು. ಕಲೆ ಮತ್ತು ಶಿಕ್ಷಣವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದರು.

ಗ್ರಾಮೀಣ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯುವಜನ ಮೇಳಗಳು ಸಹಕಾರಿಯಾಗಲಿವೆ. ಯುವ ಜನರು ಜಾನಪದ ಕಲೆಗಳನ್ನು ಉಳಿಸಿ ಎಂದು ಸಲಹೆ ನೀಡಿದರು. ಮಹದೇಂದ್ರ, ದೇವಿಕಾ, ಕ್ರೀಡಾ ಇಲಾಖೆಯ ದೀಪಕ್‌, ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಂ. ಟಿ. ಮಂಜುನಾಥಸ್ವಾಮಿ ಮತ್ತು ಉಪ ನಿರ್ದೇಶಕ ಎಂ. ಎಸ್‌. ರಮೇಶ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಕ್ತ ಕೆ. ಶ್ರೀನಿವಾಸ್‌ ಸೇರಿದಂತೆ 9 ಜಿಲ್ಲೆಯ ಕಲಾವಿದರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next