Advertisement

ಶಿವಮೊಗ್ಗ: ಓಂ ಶಕ್ತಿ ದೇಗುಲದಿಂದ ವಾಪಸ್ಸಾದ ಭಕ್ತರಿಗೆ ಕಡ್ಡಾಯ ತಪಾಸಣೆ

03:42 PM Jan 05, 2022 | Team Udayavani |

ಶಿವಮೊಗ್ಗ: ತಮಿಳುನಾಡಿನ  ಓಂ ಶಕ್ತಿ ದೇಗುಲಕ್ಕೆ ತೆರಳಿದ್ದ ಭಕ್ತರು ಶಿವಮೊಗ್ಗಕ್ಕೆ ಇಂದು,ಬುಧವಾರ ವಾಪಸ್ಸಾಗುತ್ತಿದ್ದು, ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

Advertisement

ಮಂಡ್ಯದಲ್ಲಿ ಓಂ ಶಕ್ತಿಗೆ ತೆರಳಿದ್ದ 30 ಕ್ಕೂ ಅಧಿಕ ಭಕ್ತರಿಗೆ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಲಾಗಿದ್ದು, ಶಿವಮೊಗ್ಗದಿಂದ ಒಟ್ಟು 82 ಬಸ್ಸಿನಲ್ಲಿ 4 ಸಾವಿರಕ್ಕೂ ಅಧಿಕ ಭಕ್ತರು ಓಂ ಶಕ್ತಿಗೆ ತೆರಳಿದ್ದರು.ಡಿಸೆಂಬರ್ 31 ರಂದು ತೆರಳಿದ್ದ ಭಕ್ತರು ಇಂದು ವಾಪಸ್ಸಾಗುತ್ತಿದ್ದು, ಜಿಲ್ಲಾಡಳಿತ, ಭಕ್ತರಿಗೆ ಕೋವಿಡ್ ತಪಾಸಣೆಗೆ ಒಳಪಡಿಸುತ್ತಿದೆ.

ನಗರದ ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ ಕೋವಿಡ್ ತಪಾಸಣೆ ನಡೆಸಲಾಗುತ್ತಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿಯೊಬ್ಬರಿಗೂ ಸ್ಕ್ರೀನಿಂಗ್ ನಡೆಸಿ, ರ್ಯಾಪಿಡ್ ಟೆಸ್ಟ್ ನಡೆಸುತ್ತಿದ್ದಾರೆ. ಸ್ಕ್ರೀನಿಂಗ್ ಹಾಗು ರ್ಯಾಪಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಪತ್ತೆಯಾದರೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲು ಜಿಲ್ಲಾಡಳಿತ ತೀರ್ಮಾನಿಸಿದೆ. ನೆಗೆಟಿವ್ ಬಂದವರಿಗೆ ಹೋಂ ಕ್ವಾರಂಟೈನ್ ಗೆ ಒಳಪಡಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next