Advertisement

Shimoga: ಪುರದಾಳು ಗ್ರಾಮದಲ್ಲಿ ಕಾಡಾನೆ ದಾಳಿ; ಬಾಳೆ-ಅಡಿಕೆ ತೋಟದಲ್ಲಿ ದಾಂಧಲೆ

12:55 PM Sep 29, 2024 | keerthan |

ಶಿವಮೊಗ್ಗ: ಮಲೆನಾಡಿನಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಮುಂದುವರೆದಿದೆ. ಶಿವಮೊಗ್ಗದಲ್ಲಿ ಕಾಡಾನೆ ದಾಳಿಗೆ ಬಾಳೆ ತೋಟ ಹಾಗೂ ಅಡಿಕೆ ತೋಟ ನಾಶವಾಗಿದ್ದು, ರೈತರು ಸಂಕಷ್ಟ ಪಡುವಂತಾಗಿದೆ.

Advertisement

ಶನಿವಾರ ತಡರಾತ್ರಿ ಪುರದಾಳು ಗ್ರಾಮದ ಬೇಳೂರುನಲ್ಲಿ ಮೂರು ಕಾಡಾನೆಗಳು ನಾಗರಾಜ್ ಎಂ.ಡಿ ಹಾಗೂ ಕನ್ನಪ್ಪ ಎಂಬುವವರ ತೋಟದ ಮೇಲೆ ದಾಳಿ ನಡೆಸಿವೆ. ತೋಟಕ್ಕೆ ಲಗ್ಗೆ ಇಟ್ಟ ಆನೆಗಳು ಬೆಳೆ ನಾಶ ಮಾಡಿವೆ.

ಕಾಡಾನೆ ಹಾವಳಿಯನ್ನು ತಪ್ಪಿಸುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ದಿನಗಳ ಹಿಂದೆಯಷ್ಟೇ ಇದೇ ರೀತಿ ದಾಳಿ ನಡೆಸಿ ಬೆಳೆ ಹಾನಿಗೆ ಕಾಡಾನೆಗಳು ಕಾರಣವಾಗಿದ್ದವು. ಕೂಡಲೇ ಕಾಡಾನೆಗಳನ್ನು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಪುರುದಾಳು ಗ್ರಾಮಕ್ಕೆ ಲಗ್ಗೆಯಿಟ್ಟಿದ್ದ ಕಾಡಾನೆಗಳು ಇದೀಗ ಮತ್ತೆ ದಾಂಧಲೆ ಉಂಟು ಮಾಡಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next