Advertisement

Shimoga: ಪೊಲೀಸರ ಮೇಲೆ ಹಲ್ಲೆಗೆ ಯತ್ನ; ರೌಡಿಶೀಟರ್‌ ಕಾಲಿಗೆ ಗುಂಡೇಟು

11:50 AM Oct 07, 2024 | Team Udayavani |

ಶಿವಮೊಗ್ಗ: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿ ಶೀಟರ್ ಕಾಲಿಗೆ ಪೊಲೀಸರು ಗುಂಡೇಟು ಹೊಡದ ಘಟನೆ ಶಿವಮೊಗ್ಗ ನಗರದಲ್ಲಿ ಸೋಮವಾರ (ಅ.07) ನಡೆದಿದೆ.

Advertisement

ಹಬಿಬ್ ವುಲ್ಲಾ ಅಲಿಯಾಸ್ ಅಮ್ಮು ಎನ್ನುವ ರೌಡಿ ಶೀಟರ್ ಕಾಲಿಗೆ ಗುಂಡೇಟು ಬಿದ್ದಿದೆ.

ಸೆಕ್ಷನ್‌ 307 ಪ್ರಕರಣದಲ್ಲಿ ಶಿವಮೊಗ್ಗ ನಗರದ ಗರುಡ ಲೇಔಟ್ ಬಳಿ ಬಂಧಿಸಲು ಹೋದಾಗ ರೌಡಿಶೀಟರ್‌ ಹಬಿಬ್‌ ವುಲ್ಲಾನು ಜಯಪ್ಪ ಎನ್ನುವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ತುಂಗಾ ನಗರ ಸಿಪಿಐ ಕೆ.ಟಿ ಗುರುರಾಜ್ ಅವರು ರೌಡಿ ಶೀಟರ್ ಕಾಲಿಗೆ ಗುಂಡೇಟು ನುಗ್ಗಿಸಿದ್ದಾರೆ.

ರೌಡಿ ಶೀಟರ್ ಹಿಬಿಬ್ ವುಲ್ಲಾ ಜುಲೈ ತಿಂಗಳಿನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ.

ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next