Advertisement

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ : ಶಿಖರ್ ಧವನ್ ಗೆ ನಾಯಕತ್ವ

07:48 PM Oct 02, 2022 | Team Udayavani |

ನವದೆಹಲಿ : ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಭಾನುವಾರ ಪ್ರಕಟಿಸಿದ್ದು, ಶಿಖರ್ ಧವನ್ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದ್ದು, ಶ್ರೇಯಸ್ ಅಯ್ಯರ್ ಅವರಿಗೆ ಉಪನಾಯಕತ್ವ ಪಟ್ಟ ನೀಡಲಾಗಿದೆ.

Advertisement

ರಜತ್ ಪಾಟಿದಾರ್ ಮತ್ತು ಮುಖೇಶ್ ಕುಮಾರ್ ಅವರು ತಮ್ಮ ಮೊದಲ ಬಾರಿಗೆ ತಂಡಕ್ಕೆ ಕರೆ ಸ್ವೀಕರಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ನ ಮೇಲೆ ಪ್ರಭಾವ ಬೀರಲು ತಂಡದಲ್ಲಿ ಹಲವಾರು ಯುವ ಆಟಗಾರರಿಗೆ ಅವಕಾಶ ನೀಡಿದ್ದಾರೆ. ಟಿ20 ವಿಶ್ವಕಪ್‌ಗೆ ಮೀಸಲು ಆಟಗಾರರಾಗಿದ್ದ ದೀಪಕ್ ಚಹಾರ್ ಮತ್ತು ರವಿ ಬಿಷ್ಣೋಯ್ ಕೂಡ ತಂಡದ ಭಾಗವಾಗಲಿದ್ದಾರೆ. ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಇಬ್ಬರು ವಿಕೆಟ್ ಕೀಪಿಂಗ್ ಆಯ್ಕೆಗಳಾಗಿದ್ದಾರೆ.

ತಂಡ ಇಂತಿದೆ

ಶಿಖರ್ ಧವನ್ (ನಾಯಕ), ಶ್ರೇಯಸ್ ಅಯ್ಯರ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭ್ಮನ್ ಗಿಲ್, ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೀ ), ಸಂಜು ಸ್ಯಾಮ್ಸನ್ (ವಿಕೀ), ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್ , ಅವೇಶ್ ಖಾನ್, ಮೊಹಮ್ಮದ್. ಸಿರಾಜ್, ದೀಪಕ್ ಚಹಾರ್.

ಪಂದ್ಯಗಳ ವೇಳಾಪಟ್ಟಿ

Advertisement

ಅಕ್ಟೋಬರ್ 6, 1ನೇ ಏಕದಿನ – ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ, ಮಧ್ಯಾಹ್ನ 1.30ಕ್ಕೆ ಆರಂಭ

ಅಕ್ಟೋಬರ್ 9, 2 ನೇ ಏಕದಿನ – JSCA ಇಂಟರ್ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್, ರಾಂಚಿ, ಮಧ್ಯಾಹ್ನ 1.30ಕ್ಕೆ ಆರಂಭ

ಅಕ್ಟೋಬರ್ 11, 3ನೇ ಏಕದಿನ – ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ, ಮಧ್ಯಾಹ್ನ 1.30 ಕ್ಕೆ ಆರಂಭ

Advertisement

Udayavani is now on Telegram. Click here to join our channel and stay updated with the latest news.

Next