Advertisement

ಶಿಡ್ಲಘಟ್ಟ : ಸೇತುವೆಯ ಬದಿಗೆ ಉರುಳಿದ ಸರಕು ಸಾಗಾಣಿಕೆ ವಾಹನ, ತಪ್ಪಿದ ಭಾರೀ ಅನಾಹುತ

10:00 AM Sep 14, 2022 | Team Udayavani |

ಶಿಡ್ಲಘಟ್ಟ : ಕ್ಯಾರೆಟ್ ತೆಗೆಯಲು ಕೂಲಿಕಾರರನ್ನು ಚಿಕ್ಕಬಳ್ಳಾಪುರ ದತ್ತ ಕೊಂಡೊಯ್ಯುತ್ತಿದ್ದ ಸರಕು ಸಾಗಾಣಿಕೆ ವಾಹನ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಲ್ಲಿ ಉರುಳಿ ವಾಹನದಲ್ಲಿದ್ದ ಕೂಲಿ ಕಾರ್ಮಿಕರು ಅದೃಷ್ಟವಶಾತ್ ಪಾರಾಗಿದ್ದಾರೆ.

Advertisement

ಬೆಳಂ ಬೆಳಗ್ಗೆ ಶಿಡ್ಲಘಟ್ಟ ತಾಲೂಕಿನ ಅರಕೆರೆ ಗ್ರಾಮದಿಂದ ಕೂಲಿಕಾರರನ್ನು ಸಾಗಿಸಿಕೊಂಡು ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಕ್ಯಾರೆಟ್ ತಡಗೆಸಲು ತೆರಳುತ್ತಿದ್ದ ಸರಕು ಸಾಗಾಣಿಕೆ ವಾಹನ ಶಿಡ್ಲಘಟ್ಟ ಚಿಕ್ಕಬಳ್ಳಾಪುರ ಮಾರ್ಗ ಮಧ್ಯೆ ಇರುವ ಹಂಡಿಗನಾಳ ಸಮೀಪದ ರಾಜಗಾಲುವೆ ಸೇತುವೆಯ ಕೆಳಗೆ ಉರುಳಿ ಬಿದ್ದಿದೆ.

ಹಳೆಯ ಮತ್ತು ಹೊಸ ಸೇತುವೆಯ ಮಧ್ಯೆ ವಾಹನ ಸಿಲುಕಿಕೊಂಡಿದ್ದರಿಂದ ಅನಾಹುತ ತಪ್ಪಿದೆ ವಾಹನ ಮುಗಿಸಿ ಬಿದ್ದಿದ್ದರೆ ಭಾರಿ ಅನಾಹುತ ಆಗುತ್ತಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಈ ಸಂಬಂಧ ವಾಯುವಿಹಾರಕ್ಕೆ ತೆರಳುತ್ತಿದ್ದ ನಾಗರಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಮಹಾರಾಷ್ಟ್ರ : ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳಿಗೆ ಹಿಗ್ಗಾಮುಗ್ಗಾ ಥಳಿತ! ವಿಡಿಯೋ ವೈರಲ್

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next