Advertisement

ಔಷಧಿ ಸಿಂಪಡಿಸಿದ ಸೊಪ್ಪು ತಿಂದು 13 ಕುರಿ ಮರಿ ಸಾವು

09:52 AM Dec 18, 2019 | Hari Prasad |

ಮುದಗಲ್ಲ: ತೋಟದಲ್ಲಿ ಔಷಧಿ ಸಿಂಪಡಿಸಿದ ಸೊಪ್ಪು ತಿಂದು 13 ಕುರಿಮರಿ ಮೃತಪಟ್ಟ ಘಟನೆ ಸಮೀಪದ ದೇಸಾಯಿ ಭೋಗಾಪುರ ಗ್ರಾಮದ ಹೊರವಲಯದಲ್ಲಿ ಸೊಮವಾರ ರಾತ್ರಿ ಜರುಗಿದೆ. ದೇಸಾಯಿ ಭೋಗಾಪುರ ಗ್ರಾಮದ ದುರುಗಪ್ಪ ಸಣ್ಣೆಪ್ಪ ನಾಯಕ ಎಂಬುವರಿಗೆ ಈ ಕುರಿಮರಿ ಸೇರಿವೆ.

Advertisement

ಗ್ರಾಮದ ಹೊರವಲಯದ ತಮ್ಮ ಜಮೀನಿನಲ್ಲಿ ಕುರಿಹಟ್ಟಿ ಹಾಕಲಾಗಿತ್ತು. ಹಟ್ಟಿಯಿಂದ ಹೊರಬಂದ ಕುರಿಮರಿಗಳು ಹಟ್ಟಿ ಪಕ್ಕದಲ್ಲಿರುವ ಆಂಧ್ರ ಮೂಲದ ರೆಡ್ಡಿ ಎಂಬುವರ ತೋಟದಲ್ಲಿ ಮೇಯ್ದು ರಾತ್ರಿ ಅಸ್ವಸ್ಥಗೊಂಡಿದ್ದವು. ಪಶು ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ 13 ಕುರಿಮರಿ ಸಾವನ್ನಪ್ಪಿವೆ ಎಂದು ಕುರಿಗಾಯಿ ಸಣ್ಣೆಪ್ಪ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next