Advertisement

ರಾಹುಲ್‌ಗೆ ಶಾ ಟಾಂಗ್‌

01:20 AM Feb 24, 2019 | Team Udayavani |

ಗೋರಖ್‌ಪುರ: “”ಕೃಷಿಯ ಬಗ್ಗೆ ಸೀಮಿತ ಜ್ಞಾನ ಹೊಂದಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ರೈತರ ಬಗ್ಗೆ ಉತ್ತಮ ಸಲಹೆಗಳನ್ನು ನೀಡಲು ಹೇಗೆ ಸಾಧ್ಯ” ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಪ್ರಶ್ನಿಸಿದ್ದಾರೆ. 

Advertisement

ಲಕ್ನೋದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, “”ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಮೋದಿ ಆಶ್ವಾಸನೆ ಸುಳ್ಳು ಎಂದು ರಾಹುಲ್‌ ಹೇಳಿದ್ದಾರೆ. ಆದರೆ, ರಾಹುಲ್‌ ಅವರಿಗೆ ಆಲೂಗಡ್ಡೆ ಹೊಲದಲ್ಲಿ ಬೆಳೆಯುತ್ತೋ, ಕಾರ್ಖಾನೆಯಲ್ಲಿ ಉತ್ಪತ್ತಿ ಯಾಗುತ್ತೋ ಎಂಬುದೇ ಗೊತ್ತಿಲ್ಲ. ಇಂಥವರು ರೈತರಿಗೆ ಹೇಗೆ ಸಲಹೆ ನೀಡಲು ಸಾಧ್ಯ?” ಎಂದ ಅವರು, “”ರೈತರ ಆದಾಯದ ವಿಚಾರದಲ್ಲಿ ಜೆಪಿ ತಮಾಷೆ ಮಾಡುವುದಿಲ್ಲ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next