Advertisement

ರವಿಶಾಸ್ತ್ರಿ ವೈಫಲ್ಯವನ್ನು ಸಹಿಸಿಕೊಳ್ಳುತ್ತಿದ್ದುದು ತುಂಬಾ ಕಡಿಮೆ: ದಿನೇಶ್ ಕಾರ್ತಿಕ್

03:37 PM Aug 17, 2022 | Team Udayavani |

ನವದೆಹಲಿ: ”ರವಿಶಾಸ್ತ್ರಿ ಅವರು ವಿಶೇಷ ಸಾಧನೆ ಮಾಡಲು ಆಟಗಾರರನ್ನು ಹುರಿದುಂಬಿಸುತ್ತಿದ್ದರು, ಆದರೆ ಅವರು ಭಾರತದ ಮುಖ್ಯ ಕೋಚ್ ಆಗಿದ್ದಾಗ ವೈಫಲ್ಯವನ್ನು ಸಹಿಸಿಕೊಳ್ಳುತ್ತಿದ್ದುದು ತುಂಬಾ ಕಡಿಮೆ” ಎಂದು ಅನುಭವಿ ವಿಕೆಟ್‌ಕೀಪರ್ ಮತ್ತು ಬ್ಯಾಟ್ಸ್ ಮ್ಯಾನ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

Advertisement

ಕ್ರಿಕ್‌ಬಝ್ ಡಾಕ್ಯುಸರೀಸ್ ‘ಸಮ್ಮರ್ ಸ್ಟಾಲಿಮೇಟ್’ ನಲ್ಲಿ ಮಾತನಾಡಿ “ಶಾಸ್ತ್ರಿ ಅವರು ಇಷ್ಟಪಡದ ನಿರ್ದಿಷ್ಟ ವೇಗದಲ್ಲಿ ಬ್ಯಾಟಿಂಗ್ ಮಾಡದ ಯಾರಿಗಾದರೂ ಅಥವಾ ನೆಟ್ಸ್ ಮತ್ತು ಮ್ಯಾಚ್‌ನಲ್ಲಿ ಕಡಿಮೆ ಸಹಿಷ್ಣುತೆಯನ್ನು ಹೊಂದಿದ್ದರು. ಅವರು ವಿಭಿನ್ನವಾಗಿ ಬ್ಯಾಟ್ ಮಾಡಲು ಬಯಸುತ್ತಿದ್ದರು” ಎಂದು ಕಾರ್ತಿಕ್ ಹೇಳಿದ್ದಾರೆ.

“ಶಾಸ್ತ್ರಿ ಅವರಿಗೆ ತಂಡದಿಂದ ಏನು ಬೇಕು, ಅದನ್ನು ಮಾಡಿಸುವ ರೀತಿ ನಿಖರವಾಗಿ ತಿಳಿದಿತ್ತು ಆದರೆ ವೈಫಲ್ಯಗಳನ್ನು ಸಹಿಯುವಲ್ಲಿ ಅವರ ಸಹನೆ ಬಹಳ ಕಡಿಮೆ. ಅವರು ಯಾವಾಗಲೂ ಚೆನ್ನಾಗಿ ಆಡಲು ಒತ್ತಾಯಿಸುತ್ತಿದ್ದರು ಎಂದಿದ್ದಾರೆ.

“ನನ್ನ ಪ್ರಕಾರ ಶಾಸ್ತ್ರಿ ತರಬೇತುದಾರರಾಗಿ ತಮ್ಮ ಸಾಮರ್ಥ್ಯವನ್ನು ತೋರಿದರು. ಅವರು ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿ ಮಾಡಿದರು. ತರಬೇತುದಾರರಾಗಿ, ಅವರು ದೊಡ್ಡ ವ್ಯಕ್ತಿಯಾಗಿದ್ದರು. ಅವರು ವಿಶೇಷ ವಿಷಯಗಳನ್ನು ಪ್ರಯತ್ನಿಸಲು ಮತ್ತು ಸಾಧಿಸಲು ಆಟಗಾರರನ್ನು ಪ್ರೇರೇಪಿಸಿದ ವ್ಯಕ್ತಿ ಎಂದರು.

ರೋಹಿತ್ ಶರ್ಮಾ-ರಾಹುಲ್ ದ್ರಾವಿಡ್ ಯುಗದಲ್ಲಿ ತಾನು ಹೆಚ್ಚು ನಿರಾಳವಾಗಿದ್ದೇನೆ ಮತ್ತು ಸುರಕ್ಷಿತವಾಗಿರುತ್ತೇನೆ ಎಂದು ಕಾರ್ತಿಕ್ ಈಗಾಗಲೇ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next