Advertisement

ಯಾಕೆ ಕ್ಷಮೆಯಾಚಿಸಬೇಕು? ; ರಾಹುಲ್ ಗಾಂಧಿ ತಪ್ಪು ಮಾತನಾಡಿಲ್ಲ ಎಂದ ತರೂರ್

04:52 PM Mar 17, 2023 | Team Udayavani |

ನವದೆಹಲಿ: ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಲು ವಿದೇಶಿ ಶಕ್ತಿಗಳು ನಮ್ಮ ದೇಶಕ್ಕೆ ಬರಬೇಕೆಂದು ರಾಹುಲ್ ಗಾಂಧಿ ಎಂದಿಗೂ ಒತ್ತಾಯಿಸಲಿಲ್ಲ,ಅವರು ಏನನ್ನೂ ಹೇಳಿಲ್ಲ, ಅವರು ಯಾಕೆ ಕ್ಷಮೆಯಾಚಿಸಬೇಕು? ಇದು ಅಸಂಬದ್ಧ” ಎಂದು ಕಾಂಗ್ರೆಸ್ ಹಿರಿಯ ನಾಯಕ , ಸಂಸದ ಶಶಿ ತರೂರ್ ಹೇಳಿಕೆ ನೀಡಿದ್ದಾರೆ.

Advertisement

ಎಎನ್ ಐ ನೊಂದಿಗೆ ಮಾತನಾಡಿದ ತರೂರ್ “ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಮತ್ತು ಪ್ರತಿಯೊಬ್ಬರೂ ಅದರ ಬಗ್ಗೆ ತಿಳಿದುಕೊಳ್ಳಬೇಕು. ನಾನು ಅದರಲ್ಲಿ ಯಾವುದೇ ತಪ್ಪನ್ನು ಕೇಳಿಲ್ಲ” ಎಂದು ಹೇಳಿದರು.

ಇದನ್ನೂ ಓದಿ : ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ಮಾಡುವವರು ರಾಷ್ಟ್ರವಿರೋಧಿಗಳೇ?: ಮಲ್ಲಿಕಾರ್ಜುನ ಖರ್ಗೆ

ಸಂಸತ್ತಿನ ಬಜೆಟ್ ಅಧಿವೇಶನದ ಕುರಿತು ಮಾತನಾಡಿದ ತರೂರ್, “ಸಂಸತ್ತನ್ನು ನಡೆಸುವುದು ಸರಕಾರದ ಜವಾಬ್ದಾರಿಯಾಗಿದೆ. ಬಜೆಟ್ ಅಧಿವೇಶನ ನಡೆಯುತ್ತಿದೆ, ಹಣಕಾಸು ಮಸೂದೆಯನ್ನು ಅಂಗೀಕರಿಸುವ ಅಗತ್ಯವಿದೆ.ಇಂತಹ ಪ್ರಮುಖ ವಿಷಯಗಳಿರುವಾಗ, ನೀವು ಸಂಸತ್ತಿಗೆ ಯಾವುದೇ ಸಮಸ್ಯೆಯ ಮೇಲೆ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತಿಲ್ಲ” ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next