Advertisement

ಸುನಂದಾ ಸಾವು;ತರೂರ್‌ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಕೇಸ್‌!

04:10 PM May 14, 2018 | Team Udayavani |

ಹೊಸದಿಲ್ಲಿ : ಸುನಂದಾ ಪುಷ್ಕರ್‌ ನಿಗೂಢ ಸಾವಿಗೆ ಸಂಬಂಧಿಸಿ ದೆಹಲಿ ಪೊಲೀಸರು  ಹಿರಿಯ ಕಾಂಗ್ರೆಸ್‌ ನಾಯಕ, ಪತಿ ಶಶಿ ತರೂರ್‌ ವಿರುದ್ಧ ಸೋಮವಾರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಕೇಸ್‌ ದಾಖಲಿಸಿದ್ದಾರೆ. 

Advertisement

ಮೆಟ್ರೋಪೊಲಿಟನ್‌ ಮ್ಯಾಜಿಸ್ಟ್ರೇಟ್‌ ಧರ್ಮೇಂದರ್‌ ಸಿಂಗ್‌ ಅವರ ಎದುರು ಪೊಲೀಸರು ಐಪಿಸಿ ಸೆಕ್ಷನ್‌ 498 ಎ(ಪತಿ ಅಥವಾ ಸಂಬಂಧಿಯಿಂದ ಮಹಿಳೆಯ ಮೇಲೆ ದೌರ್ಜನ್ಯ) ಮತ್ತು 306(ಆತ್ಮಹತ್ಯೆಗೆ ಪ್ರೇರಣೆ) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುನಂದಾ ಸಾವಿನ 4 ವರ್ಷಗಳ ಬಳಿಕ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಚಾರ್ಜ್‌ ಶೀಟ್‌ ಸಲ್ಲಿಸಿದ್ದು, ಸುಮಾರು 3,000 ಪುಟಗಳ ಚಾರ್ಜ್‌ ಶೀಟನ್ನು  ಸಲ್ಲಿಸಲಾಗಿದೆ.  

ಸುನಂದಾ 2014 ರ ಜನವರಿ 17 ರಂದು ದೆಹಲಿಯ ಲೀಲಾ ಪ್ಯಾಲೇಸ್‌ ಹೊಟೇಲ್‌ನಲ್ಲಿ  ನಿಗೂಢವಾಗಿ ಸಾವನ್ನಪ್ಪಿದ್ದರು. ಆದರೆ ಪೊಲೀಸರು 2015 ಜನವರಿ 1 ರಂದು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್‌ ದಾಖಲಿಸಿ ತನಿಖೆಗಿಳಿದಿದ್ದರು. 

ತರೂರ್‌ ಅವರು ಪ್ರಕರಣದಲ್ಲಿ ಏಕೈಕ ಆರೋಪಿಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next