Advertisement

ಕಾಂಗ್ರೆಸ್‌ಗೆ ಶಾಶ್ವತ ಅಧ್ಯಕ್ಷರೊಬ್ಬರು ಬೇಕು

11:45 PM Sep 18, 2021 | Team Udayavani |

ತಿರುವನಂತಪುರ: ಕಾಂಗ್ರೆಸ್‌ಗೆ ಶಾಶ್ವತ ಅಧ್ಯಕ್ಷರೊ­ಬ್ಬರು ಬೇಕಾಗಿದ್ದಾರೆ ಎಂದು ಆ ಪಕ್ಷದ ಸಂಸದ ಶಶಿ ತರೂರ್‌ ತಿಳಿಸಿದ್ದಾರೆ.

Advertisement

ಪಂಜಾಬ್‌ ಕಾಂಗ್ರೆಸ್‌ನಲ್ಲಿನ ಬೆಳವಣಿಗೆ ಬೆನ್ನಲ್ಲೇ ತರೂರ್‌ ಹೇಳಿಕೆ ಮಹತ್ವ ಪಡೆದಿದೆ. ಕೇರಳದ ಇಡುಕ್ಕಿ ಜಿಲ್ಲೆಯ ತೋಡುಪ್ಪುಳ ಎಂಬಲ್ಲಿ ಪಕ್ಷದ ಸಮಾರಂಭವೊಂದರಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ. “”ಪಕ್ಷಕ್ಕೆ ಶಾಶ್ವತ ನಾಯಕರೊಬ್ಬರು ಇರದಿದ್ದರೆ ಪಕ್ಷದ ಸ್ಥಿತಿ ಏನಾಗುತ್ತದೆ ಎಂಬುದು ಮುಂಬರುವ ದಿನಗಳಲ್ಲಿ ತಿಳಿದು ಬರಲಿದೆ.

ಸೋನಿಯಾ ಗಾಂಧಿಯವರು ದಶಕಗಳ ಕಾಲ ಪಕ್ಷವನ್ನು ಸಮರ್ಥ­ವಾಗಿ ಮುನ್ನಡೆಸುತ್ತಾ ಬಂದಿದ್ದಾರೆ. ಆದರೆ, ತಮ್ಮ ಜವಾಬ್ದಾರಿಯಿಂದ ತಮ್ಮನ್ನು ವಿಮುಕ್ತಿಗೊಳಿಸಬೇಕೆಂದು ಅವರು ಕೋರಿರುವುದರಿಂದ ಅವರ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನು ಆರಿಸಿಕೊಳ್ಳುವುದು ಅನಿವಾರ್ಯವಾಗಿದೆ” ಎಂದು ಅವರು ಹೇಳಿದ್ದಾರೆ.

“ರಾಹುಲ್‌ ಗಾಂಧಿಯವರು ಆ ಜವಾಬ್ದಾರಿ ಹೊರಲು ಸಿದ್ಧರಿಲ್ಲ. ಹಾಗಾಗಿ, ಬೇರೊಬ್ಬ ನಾಯಕರನ್ನು ಹುಡುಕಿಕೊಳ್ಳಬೇಕೆಂದು ನನ್ನಂಥ ನಾಯಕರು ಆಶಿಸುತ್ತಿದ್ದಾರೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next