Advertisement

ಶಶಾಂಕ್‌ಗೆ ಅನಾರೋಗ್ಯ: ಐಸಿಸಿ ಸಭೆ ದುಬಾೖಗೆ ಸ್ಥಳಾಂತರ

09:59 AM Oct 01, 2019 | Team Udayavani |

ಮುಂಬಯಿ: ಮುಂದಿನ ತಿಂಗಳು ಆಸ್ಟ್ರೇಲಿಯದ ಸಿಡ್ನಿಯಲ್ಲಿ ನಡೆಯಬೇಕಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ (ಐಸಿಸಿ) ಸಭೆ ದುಬಾೖಗೆ ಸ್ಥಳಾಂತರವಾಗಿದೆ.

Advertisement

ಐಸಿಸಿ ಮುಖ್ಯಸ್ಥ ಶಶಾಂಕ್‌ ಮನೋಹರ್‌ ಅನಾರೋಗ್ಯಪೀಡಿತರಾಗಿದ್ದಾರೆ, ಅವರಿಗೆ ದೂರದ ಸ್ಥಳಗಳಿಗೆ ಪ್ರವಾಸ ಹೋಗಲು ಸಾಧ್ಯವಿಲ್ಲವಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಅಲ್ಲದೇ ಮುಂದಿನ ತಿಂಗಳು 4ರಂದು ನಡೆಯಬೇಕಿರುವ ಕಾರ್ಯನಿರ್ವಣಾಧಿಕಾರಿಗಳ ಸಭೆಯನ್ನು ಒಂದು ವಾರ ಮುಂದೂಡಲಾಗಿದೆ. ಈ ಸಭೆಯನ್ನು ಐಸಿಸಿ ಮುಖ್ಯ ಸಭೆಯಲ್ಲೇ ನಡೆಸಲು ತೀರ್ಮಾನಿಸಲಾಗಿದೆ. ಇದನ್ನೂ ಅಧಿಕೃತವಾಗಿ ತಿಳಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next