Advertisement

ಚತುರ್ದಿನ ಪಂದ್ಯ: ಪ್ರಸಿದ್ಧ್ ಕೃಷ್ಣ ಬದಲು ಶಾರ್ದೂಲ್ ಠಾಕೂರ್

11:37 PM Sep 04, 2022 | Team Udayavani |

ಬೆಂಗಳೂರು: ಬೆನ್ನುನೋವಿನಿಂದಾಗಿ ಭಾರತ “ಎ’ ತಂಡದಿಂದ ಬೇರ್ಪಟ್ಟ ಪ್ರಸಿದ್ಧ್ ಕೃಷ್ಣ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಅವರನ್ನು ಆರಿಸಲಾಗಿದೆ.

Advertisement

ಇಲ್ಲಿ ನಡೆಯಲಿರುವ ಪ್ರವಾಸಿ ನ್ಯೂಜಿಲ್ಯಾಂಡ್‌ “ಎ’ ಎದುರಿನ ಉಳಿದೆರಡು ಚತುರ್ದಿನ ಪಂದ್ಯಗಳಿಗಾಗಿ ಈ ಬದಲಾವಣೆ ಮಾಡಿಕೊಳ್ಳಲಾಗಿದೆ.

ಪಶ್ಚಿಮ ವಲಯ ದುಲೀಪ್‌ ಟ್ರೋಫಿ ತಂಡದಲ್ಲಿರುವ ಅವರನ್ನು ಕೂಡಲೇ ಭಾರತ “ಎ’ ತಂಡವನ್ನು ಸೇರಿಕೊಳ್ಳುವಂತೆ ಸೂಚಿಸಲಾಗಿದೆ. ದುಲೀಪ್‌ ಟ್ರೋಫಿ ತಂಡಕ್ಕೆ ರಾಜ್‌ಕೋಟ್‌ನ ಎಡಗೈ ಪೇಸರ್‌ ಚೇತನ್‌ ಸಕಾರಿಯಾ ಅವರನ್ನು ಸೇರಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next