Advertisement

ನಂಗೆ ನಾನೇ ಕಟ್ಟಿ ಕೊಂಡೆ ಗೋರಿ..ಕ್ರ್ಯಾಕ್‌ ಸಿನಿಮಾಗೆ ಶರಣ್‌ ಗಾನ

04:30 PM Jun 22, 2017 | |

ಶರಣ್‌ ಇತ್ತೀಚೆಗೆ ಹಾಡುವ ಮೂಡ್‌ ನಲ್ಲಿದ್ದಾರೆ. ಕಳೆದ ವಾರವಷ್ಟೇ ಅವರು “ಮುಗುಳು ನಗೆ’ ಚಿತ್ರಕ್ಕಾಗಿ ವಿ. ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಒಂದು ಹಾಡನ್ನು ಹಾಡಿದ್ದರು. ಈಗ ವಿನೋದ್‌ ಪ್ರಭಾಕರ್‌ ಅಭಿನಯದ “ಕ್ರ್ಯಾಕ್‌’ ಚಿತ್ರಕ್ಕೆ ಹಾಡಿದ್ದಾರೆ. ರಾಮ್‌ನಾರಾಯಣ್‌ ನಿರ್ದೇಶನದ ಚಿತ್ರಕ್ಕೆ ಗಾಯಕಿ ಶಮಿತಾ ಮಲಾ°ಡ್‌ ಸಂಗೀತ ನೀಡಿದ್ದಾರೆ.

Advertisement

ರಾಮ್‌ನಾರಾಯಣ್‌ ಬರೆದ “ನಂಗೆ ನಾನೇ ಕಟ್ಟಿಕೊಂಡೆ ಗೋರಿ ಬಿಟ್ಟು ಕೊಟ್ಟೆ ನನ್ನಾ ಕಾವೇರಿ, ಕಾವೇರಿ… ಸೋ ಸಾರಿ …’ ಎಂಬ ಹಾಡಿಗೆ ಯಾರ ಧ್ವನಿ ಸೂಕ್ತವಾಗುತ್ತೆ ಅನ್ನುವ ಚರ್ಚೆ ನಡೆಸುತ್ತಿರುವಂತೆಯೇ, ಶರಣ್‌ ವಾಯ್ಸ ಈ ಹಾಡಿಗೆ ಸೂಕ್ತ ಎಂದು ಅವರಿಂದಲೇ ಹಾಡಿಸಲಾಗಿದೆ. ಈ ಹಿಂದೆ ಎರಡು ಕಲಾತ್ಮಕ ಚಿತ್ರಗಳಿಗೆ ಸಂಗೀತ ಕೊಟ್ಟಿರುವ ಶಮಿತಾ ಮಲಾ°ಡ್‌ ಅವರಿಗೆ “ಕ್ರ್ಯಾಕ್‌’ ಮೊದಲ ಕಮರ್ಷಿಯಲ್‌ ಸಿನಿಮಾ. ಹಾಗಾಗಿ, ಇಲ್ಲಿರುವ ಪ್ರತಿಯೊಂದು ಹಾಡೂ ಸಹ ಹೊಸತನದಿಂದ ಕೂಡಿವೆ ಎಂಬುದು ನಿರ್ದೇಶಕರ ಮಾತು. ಅಂದಹಾಗೆ, “ಟೈಸನ್‌’ ನಂತರ ನಿರ್ದೇಶಕ ರಾಮ್‌ನಾರಾಯಣ್‌ ಹಾಗೂ ವಿನೋದ್‌ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಎರಡನೇ ಸಿನಿಮಾ “ಕ್ರ್ಯಾಕ್‌’. ವಿನೋ¨ …ಪ್ರಭಾಕರ್‌ ಇಲ್ಲಿ ವಿಭಿನ್ನವಾಗಿ ವರ್ತಿಸುವ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದಾರೆ. ಹಾಗಾಗಿ, ಚಿತ್ರಕ್ಕೆ “ಕ್ರ್ಯಾಕ್‌’ ಎಂದು ನಾಮಕರಣ ಮಾಡಿದ್ದಾರೆ.

ವಿನೋದ್‌ಗೆ ಜೋಡಿಯಾಗಿ ಆಕಾಂಕ್ಷಾ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರ ಮುಗಿದಿದ್ದು, ರಿಲೀಸ್‌ಗೆ ರೆಡಿಯಾಗಿದೆ. ಚಿತ್ರಕ್ಕೆ ವಿಜಯ್‌ ಕುಮಾರ್‌ ಹಾಗೂ ಶಂಕರ್‌ ಇಳಕಲ್‌ ನಿರ್ಮಾಪಕರು. ಜಬೇಜ್‌ ಗಣೇಶ್‌ ಕ್ಯಾಮೆರಾ ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next