Advertisement

ಹಲವು ದಶಕಗಳ ನಂತರ ಮತ್ತೆ ಕಾಶ್ಮೀರದಲ್ಲಿ ನೆಲೆಸಳಿದ್ದಾಳೆ ಶಾರದೆ

09:37 PM Oct 05, 2022 | Team Udayavani |

ಚಿಕ್ಕಮಗಳೂರು : ಹಲವು ದಶಕಗಳ ನಂತರ ಮತ್ತೆ ಕಾಶ್ಮೀರದಲ್ಲಿ ಶಾರದಾ ಮಾತೆ ಮತ್ತೆ ನೆಲೆಸಲಿದ್ದು, ಕಾಶ್ಮೀರ ಪಂಡಿತರಿಗೆ ಶೃಂಗೇರಿ ಶ್ರೀ ಮಠದಿಂದ ಕಾಶ್ಮೀರ ಪುರವಾಸಿನಿ ಶಾರದೆಯ ನೂತನ ವಿಗ್ರಹ ವನ್ನು ವಿಜಯ ದಶಮಿಯ ಶುಭ ದಿನವಾದ ಬುಧವಾರ ಹಸ್ತಾಂತರಿಸಲಾಗಿದೆ.

Advertisement

ಶೃಂಗೇರಿ ಮಠದ ಉಭಯ ಶ್ರೀಗಳಾದ ಶ್ರೀ ಭಾರತೀ ತೀರ್ಥರು ಮತ್ತು ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ನೂತನ ವಿಗ್ರಹಕ್ಕೆ  ವಿಶೇಷ ಪೂಜೆ ನಡೆಸಿದರು. ಕಾಶ್ಮೀರ ಪಂಡಿತರೂ ಆದಿಶಕ್ತಿ ನೆಲದ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: ಜಮ್ಮು ಕಾಶ್ಮೀರದಿಂದ ಭಯೋತ್ಪಾದನೆಯನ್ನು ಅಳಿಸಿ ಹಾಕುತ್ತೇವೆ: ಅಮಿತ್ ಶಾ

ಶೃಂಗೇರಿಯಿಂದ ಕಾಶ್ಮೀರದ ನೀಲಂ‌ಕಣಿವೆಯ ತ್ರೀತ್ವಾಲ್ ಗೆ ಶಾರದೆಯ ವಿಗ್ರಹವನ್ನು ಒಯ್ಯಲಾಗುತ್ತಿದ್ದು, ಮುಂದಿನ ವರ್ಷ ಸಂಕ್ರಾಂತಿಯ ನಂತರ ಉತ್ತರಾಯಣ ಸಮಯದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.

ಶ್ರೀ ಶಂಕರಾಚಾರ್ಯರು ಸರ್ವಜ್ಞ ಪೀಠರೋಹಣ ಮಾಡಿದ ಕಾಶ್ಮೀರದ ಮೂಲ ಸ್ಥಳ ಪಾಕ್ ಆಕ್ರಮಿತ ಕಾಶ್ಮೀರಲ್ಲಿದ್ದು ಬದಲಿಯಾಗಿ ತ್ರೀತ್ವಾಲ್ ನಲ್ಲಿ ನೂತನ ಶ್ರೀ ಶಾರದ ಪೀಠ ನಿರ್ಮಾಣ ಮಾಡಲಾಗುತ್ತಿದೆ. ಕಾಶ್ಮೀರ ಪುರವಾಸಿನಿ ಎಂದು ಶಾರದೆಗೆ ಇಂದಿಗೂ ಆರಾಧಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next