Advertisement

ಖೇಲ್‌ರತ್ನಕ್ಕೆ ನಾಲ್ವರು ಪ್ಯಾರಾ ಆ್ಯತ್ಲೀಟ್‌ಗಳ ಹೆಸರು ಶಿಫಾರಸು

10:12 PM Sep 18, 2021 | Team Udayavani |

ಹೊಸದಿಲ್ಲಿ: ಪ್ಯಾರಾಲಿಂಪಿಕ್ಸ್‌ ಕಮಿಟಿ ಆಫ್ ಇಂಡಿಯಾ (ಪಿಸಿಐ) ನಾಲ್ವರು ಪ್ಯಾರಾ ಆತ್ಲೀಟ್‌ಗಳನ್ನು ಪ್ರತಿಷ್ಠಿತ ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿದೆ.

Advertisement

ಇವರೆಂದರೆ ಶೂಟರ್‌ ಮನೀಶ್‌ ನರ್ವಾಲ್‌, ಹೈಜಂಪರ್‌ ಶರತ್‌ ಕುಮಾರ್‌, ಶಟ್ಲರ್‌ ಪ್ರಮೋದ್‌ ಭಗತ್‌ ಮತ್ತು ಜಾವೆಲಿನ್‌ ಎಸೆತಗಾರ ಸುಂದರ್‌ ಸಿಂಗ್‌ ಗುರ್ಜರ್‌. ಹಾಗೆಯೇ ಸುಮಿತ್‌ ಅಂಟಿಲ್‌ ಮತ್ತು ಅವನಿ ಲೇಖರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.

ಇವರೆಲ್ಲರೂ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕಗಳ ಮೆರಗು ಮೂಡಿಸಿದ್ದರು.

“ನಮ್ಮ ಆತ್ಲೀಟ್‌ಗಳು ಪ್ಯಾರಾಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರ ಬಗ್ಗೆ ನಮಗೆಲ್ಲ ಹೆಮ್ಮೆಯಿದೆ. ಇಂಥ ಪ್ರಶಸ್ತಿಗಳು ಅವರನ್ನು 2024ರ ಪ್ಯಾರಿಸ್‌ ಕ್ರೀಡಾಕೂಟಕ್ಕೆ ಹೆಚ್ಚು ಪ್ರೇರೇಪಿಸಲಿವೆ. ದೇಶವೇ ಹೆಮ್ಮೆಪಡುವಂತೆ ಮಾಡಿರುವುದರಿಂದ ಇವರೆಲ್ಲರೂ ಈ ಪ್ರಶಸ್ತಿಗೆ ಅರ್ಹರು’ ಎಂದು  ಪಿಸಿಐ ಅಧ್ಯಕ್ಷೆ ದೀಪಾ ಮಲಿಕ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next