Advertisement

ರೋಟರಿಯಿಂದ ಕಾಂಕ್ರಿಟ್‌ ಬೆಂಚ್‌ಗಳ ಕೊಡುಗೆ

07:00 AM Jul 23, 2017 | Team Udayavani |

ಶನಿವಾರಸಂತೆ: ಶನಿವಾರ ಸಂತೆ ರೋಟರಿ ಕ್ಲಬ್‌ ವತಿಯಿಂದ ಸಮಿಪದ ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ರೋಗಿಗಳು ಮತ್ತು ಸಾರ್ವಜನಿಕರು ಕುಳಿತುಕೊಳ್ಳುವ ಸಲುವಾಗಿ ಕಾಂಕ್ರಿಟ್‌ ಬೆಂಚ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. 

Advertisement

ಈ ಸಂದರ್ಭದಲ್ಲಿ ನಡೆದ ಸಮಾ ರಂಭದಲ್ಲಿ ಮಾತನಾಡಿದ ರೋಟರಿ ಕ್ಲಬ್‌ ಅಧ್ಯಕ್ಷ ಎಚ್‌.ವಿ. ದಿವಾಕರ್‌, ರೋಟರಿ ಸಂಸ್ಥೆ ಸರಕಾರಿ ಆಸ್ಪತ್ರೆ, ಸರಕಾರಿ ಶಾಲೆಗಳ ಅಭಿವೃದ್ದಿಗಾಗಿ ಪ್ರೋತ್ಸಾಹಿಸುವ ಕಾರ್ಯದ ಜತೆಯಲ್ಲಿ ಸಾರ್ವಜನಿಕ ಮತ್ತು ಸಮಾಜ ಸೇವೆಯನ್ನು ಮಾಡುತ್ತಿದೆ, ಸಾರ್ವಜನಿಕರಿಗೆ ಉಪಯೋಗವಾಗುವಂತೆ ಕೊಡು ಗೆಯನ್ನು ನೀಡುತ್ತಿದೆ, ರೋಟರಿ ಸಂಸ್ಥೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಮಾಜ ಮುಖೇನ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಗುವುದು ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಪರ್ಣ ಕೃಷ್ಣನಂದ್‌ ಮಾತನಾಡಿ, ರೋಟರಿ ಸಂಸ್ಥೆ ಸಮಾಜದಲ್ಲಿ ಜನರಿಗೆ ಸೇವಾ ಮನೋ ಭಾವನೆಯನ್ನು ಹೆಚ್ಚಿಸುವಂತಹ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನಿಯ ಎಂದರು.

ಸಾರ್ವಜನಿಕರಿಗೆ ಉಪಯೋಗ 
ಸರಕಾರದ ಕಾರ್ಯಕ್ರಮಗಳಿಗೆ ರೋಟರಿ ಸಂಸ್ಥೆಯಿಂದ ಉದಾರ ಕೊಡುಗೆಯನ್ನು ನೀಡುವುದ ರಿಂದ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ, ರೋಟರಿ ಸಂಸ್ಥೆಯ ಸಮಾಜ ಸೇವೆಯ ಧ್ಯೇಯೋದ್ದೇಶದಿಂದ ಸಮಾಜವೂ ಅಭಿವೃದ್ಧಿ ಹೊಂದುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶನಿವಾರಸಂತೆ  ರೋಟರಿ  ವಲಯದ ಕಾರ್ಯದರ್ಶಿ ಅರವಿಂದ್‌, ರೋಟರಿ ಸಂಸ್ಥೆ ನಿರ್ದೇಶಕರಾದ ಮೋಹನ್‌ರಾಮ್‌, ವಸಂತ್‌ಕುಮಾರ್‌, ಪಿ. ನಾಗೇಶ್‌, ಆಸ್ಪತ್ರೆಯ ಆರೋಗ್ಯ ನಿರೀಕ್ಷಕ ಶಿವಪ್ರಕಾಶ್‌ ಮುಂತಾದವರು ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next