Advertisement

ಶ್ರೀ ಶನಿಮಹಾತ್ಮಾ ತ್ರಿಭುವನೇಶ್ವರಿ ಸೇವಾ ಸಮಿತಿ: ಶನಿ ಮಹಾ ಪೂಜೆ ಸಂಪನ್ನ

03:21 PM Sep 14, 2021 | Team Udayavani |

ಮುಂಬಯಿ: ಶ್ರೀ ಶನಿ ಮಹಾತ್ಮಾ ತ್ರಿಭುವನೇಶ್ವರಿ ಸೇವಾ ಸಮಿತಿಯ ವಾರ್ಷಿಕ ಶನಿ ಮಹಾ ಪೂಜೆಯು ಸೆ. 4ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸರಳ ರೀತಿಯಲ್ಲಿ ನಡೆಯಿತು.

Advertisement

ಕ್ಷೇತ್ರದ ಅರ್ಚಕರಾದ ಕೃಷ್ಣ ಭಟ್‌ ಅವರು ಕಳಶ ಪ್ರತಿಷ್ಠಾಪನೆ ಮಾಡಿದರು. ಪೂಜೆಯ ಅಧ್ಯಕ್ಷತೆಯನ್ನು ಬಿ. ಕೂಸಪ್ಪ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಗೌರವ ಅಧ್ಯಕ್ಷರಾದ ಗಣೇಶ್‌ ಪಿ. ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿ ಸತೀಶ್‌ ಶೆಟ್ಟಿ, ಗೌರವ ಪ್ರಧಾನ ಕೋಶಾಧಿಕಾರಿ ಧರ್ಮಪಾಲ್‌ ಪೂಜಾರಿ, ಉಪಾಧ್ಯಕ್ಷ ದೇವದಾಸ್‌ ಉಚ್ಚಿಲ್‌, ವೈಶಾಲಿ ನಾಯ್ಕ್ , ಗುರುದಾಸ್‌ ಉಚ್ಚಿಲ್ , ಅನುಸೂಯ ಕೆಲ್ಲಾಪುತ್ತಿಗೆ, ನಾಗೇಶ್‌ ಕಾಮತ್‌, ದಯಾಕರ್‌ ಕೋಟ್ಯಾನ್‌, ಆನಂದ್‌ ಪೂಜಾರಿ, ಪುರುಷೋತ್ತಮ ಕುಂದರ್‌ ಉಪಸ್ಥಿತರಿದ್ದರು.

ಶ್ರೀ ಶನಿ ಗ್ರಂಥ ಪಾರಾಯಣ ಹಾಗೂ ಅರ್ಥ ವಿವರಣೆಯಲ್ಲಿ ವೆಸ್ಟನ್‌ ಇಂಡಿಯಾ ಸೇವಾ ಸಮಿತಿಯವರು ಸಹಕರಿಸಿದರು. ಪೂಜೆಯಲ್ಲಿ ಹರೀಶ್‌ ಶಾಂತಿ ಹೆಜಮಾಡಿ ಮತ್ತು ಸಂತೋಷ್‌ ಪೂಜಾರಿಯವರು ಸಹಕರಿಸಿದರು.

ಇದನ್ನೂ ಓದಿ:ಸೇತುವೆ ಮೇಲೆ ಹಳಿ ತಪ್ಪಿದ ಸರಕು ಸಾಗಣೆ ರೈಲು, ನದಿಗೆ ಬಿದ್ದ ಒಂಬತ್ತು ಬೋಗಿ…

 

Advertisement
Advertisement

Udayavani is now on Telegram. Click here to join our channel and stay updated with the latest news.

Next