ರಾಯ್ಪುರ: ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯ ದ್ವಿತೀಯ ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಜಯ ಸಾಧಿಸಿದೆ. ಬೌಲರ್ ಗಳ ಸಾಹಸದಿಂದ ಕಿವೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ ಟೀಂ ಇಂಡಿಯಾ ಸುಲಭ ಗೆಲುವು ಸಾಧಿಸಿದೆ.
ಘಾತಕ ದಾಳಿ ನಡೆಸಿದ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರು ಕೇವಲ 18 ರನ್ ನೀಡಿ ಮೂರು ವಿಕೆಟ್ ಕಿತ್ತರು. ಬಿಗು ದಾಳಿ ನಡೆಸಿದ ಸಿರಾಜ್ ಆರು ಓವರ್ ನಲ್ಲಿ ಕೇವಲ 10 ರನ್ ನೀಡಿ ಒಂದು ವಿಕೆಟ್ ಕಿತ್ತರು.
ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಮಿ ಅವರಿಗೆ ಟೀಮ್ ಇಂಡಿಯಾ ಈ ವರ್ಷದ ಕೊನೆಯಲ್ಲಿ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆ ಸರಿಯಾದ ಹಾದಿಯಲ್ಲಿ ತಯಾರಿಯಲ್ಲಿ ತೊಡಗಿದೆಯೇ ಎಂದು ಕೇಳಲಾಯಿತು.
ಇದನ್ನೂ ಓದಿ:ಜಲ್ಲಿಕಟ್ಟು: ಗೂಳಿ ದಾಳಿಗೆ ಸಿಲುಕಿ 14 ವರ್ಷದ ಬಾಲಕ ಸಾವು
Related Articles
ಇದಕ್ಕೆ ಉತ್ತರಿಸಿದ ಶಮಿ, “ಜನರಿಗೆ ಭಾರತ ತಂಡದ ಮೇಲೆ ಅನುಮಾನವಿದೆ ಎಂದು ನಾನು ಭಾವಿಸುವುದಿಲ್ಲ. ಕಳೆದ 4-6 ವರ್ಷಗಳಿಂದ ಉತ್ತಮ ಫಲಿತಾಂಶ ನೀಡುತ್ತಿದ್ದೇವೆ. ಇನ್ನೂ ಯಾವುದೇ ಅನುಮಾನಗಳಿದ್ದರೂ, ವಿಶ್ವಕಪ್ ಗೆ ನಮಗೆ ಸಾಕಷ್ಟು ಸಮಯ ಉಳಿದಿದೆ. ವಿಶ್ವಕಪ್ ಅಭ್ಯಾಸಕ್ಕಾಗಿ ನಾವು ಅನೇಕ ಸರಣಿಗಳನ್ನು ಹೊಂದಿದ್ದೇವೆ. ಆಟಗಾರರನ್ನು ತಿಳಿದುಕೊಳ್ಳಲು ನಮಗೆ ಹೆಚ್ಚಿನ ಸಮಯವಿದೆ. ನಮಗೆ ಇನ್ನೂ ಸಮಯವಿದೆ. ನಾವು ಸದ್ಯ ಪ್ರತಿ ಪಂದ್ಯದ ಮೇಲೆ ಗಮನ ಹರಿಸುತ್ತಿದ್ದೇವೆ” ಎಂದರು.