Advertisement

ಸಿಎಂಗೆ ಅವಮಾನ : ಶಿಕ್ಷಕ ಅಮಾನತು

08:10 AM May 06, 2018 | |

ಧಾರವಾಡ: ಸಿಎಂ ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡಿರುವ ವಿಡಿಯೋ ವೈರಲ್‌ ಮಾಡಿರುವ ಕಾರಣ ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದ ಸರಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಕ ಡಿ.ಸಿ.ಉರಾನ ಅವರನ್ನು ಅಮಾನತುಗೊಳಿಸಲಾಗಿದೆ.

Advertisement

ಉಪೇಂದ್ರ ಚಿತ್ರದಲ್ಲಿ ನಟ ಉಪೇಂದ್ರ ವ್ಯಕ್ತಿಯೊಬ್ಬನಿಗೆ ಹೊಡೆಯುವ ದೃಶ್ಯವಿದ್ದು, ಆ ದೃಶ್ಯದಲ್ಲಿ ಹೊಡೆಸಿಕೊಳ್ಳುವ  ವ್ಯಕ್ತಿಗೆ ಸಿಎಂ ಸಿದ್ದರಾಮಯ್ಯ ಅವರ ಮುಖ ಬರುವಂತೆ ಮರು ಸೃಷ್ಟಿಸಿ ವಿಡಿಯೋ ತಯಾರಿಸಲಾಗಿದೆ. ಇದಲ್ಲದೇ ಸಚಿವರಾದ ಕೆ.ಜೆ. ಜಾರ್ಜ್‌, ಆಂಜನೇಯ ಅವರನ್ನು ಅವಮಾನಿಸುವಂತಹ ದೃಶ್ಯವಿದೆ. 

ಈ ವಿಡಿಯೋವನ್ನು ದೈಹಿಕ ಶಿಕ್ಷಕ ಉರಾನ, ಚಿಲಕವಾಡ ಶಿಕ್ಷಕರ ವಾಟ್ಸ್‌ಅಪ್‌ ಗ್ರೂಪ್‌ಗೆ ಹಾಕಿದ್ದರು. ಇದಲ್ಲದೇ ಅರೆಕುರಹಟ್ಟಿ ಕ್ಲಸ್ಟರ್‌ ಮಟ್ಟದಲ್ಲಿ ಬರುವ ಎಲ್ಲಾ ಶಾಲೆಗಳ ಶಿಕ್ಷಕರ ವಾಟ್ಸ್‌ಅಪ್‌ ಗ್ರೂಪ್‌ಗೆ ಹಾಕಿ ಆ ವಿಡಿಯೋ ವೈರಲ್‌ ಆಗುವಂತೆ ಮಾಡಿದ್ದರಿಂದ ಈ ಕುರಿತು ಕರುನಾಡು ಸೇನೆ ಉತ್ತರ ಕರ್ನಾಟಕ ಸಂಘಟನೆ ದೂರು ನೀಡಿತ್ತು. ವಿಚಾರಣೆ ವರದಿಯಲ್ಲಿ ದೈಹಿಕ ಶಿಕ್ಷಕ ಉರಾನ ಅವರ ಮೊಬೈಲ್‌ನಿಂದಲೇ ವಿಡಿಯೋ ವೈರಲ್‌ ಆಗಿದ್ದು ಗೊತ್ತಾಗಿದೆ. ಈ ಕಾರಣದಿಂದ ಸೈಬರ್‌ ಕ್ರೈಂ ಇಲಾಖೆಯಿಂದ ವರದಿಯ ಮೇರೆಗೆ ಡಿಡಿಪಿಐ ಎನ್‌.ಎಚ್‌. ನಾಗೂರ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next