Advertisement

ಶಂಭುಲಿಂಗೇಶ್ವರ ದೇಗುಲ ಜಲಾವೃತ

06:27 PM Jul 19, 2022 | Team Udayavani |

ಸಿರುಗುಪ್ಪ: ತುಂಗಭದ್ರಾ ನದಿ ಕಳೆದ 5 ದಿನಗಳಿಂದ ತುಂಬಿ ಹರಿಯುತ್ತಿದ್ದು, ನದಿಯ ಎಡಭಾಗದಲ್ಲಿರುವ ಮೂಲ ಶಂಭುಲಿಂಗೇಶ್ವರ ದೇವಸ್ಥಾನವು ನೀರಿನಲ್ಲಿ ಮುಳುಗಿದೆ. ಗೋಪುರದ ಹತ್ತಿರದ ವರೆಗೆ ನೀರು ಬಂದಿರುತ್ತವೆ. ಇದರಿಂದಾಗಿ ಶಂಭುಲಿಂಗೇಶ್ವರ ಸ್ವಾಮಿ ಪೂಜೆ ಪುನಸ್ಕಾರಗಳೂ ಸ್ಥಗಿತಗೊಂಡಿವೆ.

Advertisement

ದರ್ಶನಕ್ಕೆ ಬಂದ ಭಕ್ತರು ನದಿ ನೀರಿನಲ್ಲಿ ದೇವಸ್ಥಾನ ಮುಳುಗಿರುವುದನ್ನು ಕಂಡು ವಾಪಸ್ಸಾಗುತ್ತಿದ್ದಾರೆ. ಅಲ್ಲದೆ ನದಿ ಮಧ್ಯದಲ್ಲಿರುವ ಶ್ರೀ ಆಂಜನೇ ಯಸ್ವಾಮಿ ಮೂರ್ತಿ ನೀರಿನಲ್ಲಿ ಕಳೆದೆರಡು ದಿನಗಳಿಂದ ಸಂಪೂರ್ಣ ಮುಳುಗಿದ್ದು, ದೇವಸ್ಥಾನದ ಮಂಟಪ ಮುಳುಗುವ ಹಂತ ತಲುಪಿದೆ.

ದೇಶನೂರು ಸೇತುವೆ ಹತ್ತಿರ ನದಿಯ ಸೌಂದರ್ಯ ನೋಡಲು ಪ್ರತಿನಿತ್ಯ ಸಂಜೆ ಸಾವಿರಾರು ಜನರು ಜಮಾಯಿಸುತ್ತಿದ್ದಾರೆ.ಇದರಿಂದಾಗಿ ಸೇತುವೆ ಪ್ರದೇಶದಲ್ಲಿ ಜನಜಂಗುಳಿ ಕಂಡು ಬರುತ್ತಿದೆ.

ತಾಲೂಕಿನ ಕೆಂಚನಗುಡ್ಡ ತುಂಗಭದ್ರಾ ನದಿ ತೀರದಲ್ಲಿರುವ ವಸುಧೇಂದ್ರ ತೀರ್ಥರ ದೇವಸ್ಥಾನದ ಮೆಟ್ಟಿಲವರೆಗೂ ತುಂಗಭದ್ರಾ ನದಿ ನೀರು ಭೋರ್ಗರೆದು ಹರಿಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next