Advertisement

ಹೆಲಿಕಾಪ್ಟರ್ ಇದಾವೆ, ಬೆಂಜ್ ಕಾರ್ ಇದ್ದಾವೆ.. ನನಗೇ ಇನ್ನೇನು ಬೇಕು : ಶಾಮನೂರು

04:54 PM Jul 21, 2021 | Team Udayavani |

ಬೆಂಗಳೂರು : ನಮ್ಮ‌ ಸ್ಟಾಂಡ್ ಈಗಲೂ ಅದೇ ಇದೆ. ಹೆಲಿಕಾಪ್ಟರ್ ಇದಾವೆ, ಬೆಂಜ್ ಕಾರ್ ಇದ್ದಾವೆ. ನನಗೇ ಇನ್ನೇನು ಬೇಕು.. ಸಾಕಲ್ಲ ಜೀವನ ಮಾಡೋಕೆ ಎಂದು ಬೆಂಗಳೂರಿನಲ್ಲಿ ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದಾರೆ.

Advertisement

ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಪಕ್ಷ ಕಟ್ಟಿದವರು. ಈ ಸಂದರ್ಭದಲ್ಲಿ ಅವರು ಬದಲಾವಣೆ ಮಾಡಿದ್ರೆ ಕಷ್ಟ. ಅವರ ದುರಾದೃಷ್ಟ ಅವರೇ ಅನುಭವಿಸ್ತಾರೆ. ನಾಮಗೆ ಲಿಂಗಾಯತ ಸಮುದಾಯವನ್ನು ಸೆಳೆಯೋ ಪ್ರಯತ್ನವಿಲ್ಲ ಎಂದರು.

ಈ ಹಿಂದೆ ಬಿಜೆಪಿ ಆರೋಪ ಮಾಡಿದ್ದು, ಲಿಂಗಾಯತರನ್ನು ಸೆಳೆಯಲು ಶಾಮನೂರು ಶಿವಶಂಕರಪ್ಪ ಪ್ಲಾನ್ ಮಾಡುತ್ತಿದ್ದಾರೆ ಎಂದಿದ್ದರು. ಈ ಮಾತಿಗೆ ಮಾರ್ಮಿಕವಾಗಿ ನುಡಿದಿರುವ ಶಾಮನೂರು ನನ್ನ ಬಳಿ ಹೆಲಿಕಾಪ್ಟರ್ ಇದಾವೆ, ಬೆಂಜ್ ಕಾರ್ ಇದ್ದಾವೆ. ನನಗೇ ಇನ್ನೇನು ಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next