Advertisement

Shahapura: ಕಾಂಗ್ರೆಸ್ ಮುಖಂಡ  ಜೆಡಿಎಸ್ ಸೇರ್ಪಡೆ

01:59 PM Apr 20, 2023 | Team Udayavani |

ಶಹಾಪುರ: ಮೊನ್ನೆ ಕಾಂಗ್ರೆಸ್ ಪಕ್ಷದಿಂದ ಮಾಜಿ ಮಂತ್ರಿ, ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಕೈ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡುವಾಗ ನಾಲ್ವರು ಮುಖಂಡರಲ್ಲಿ ಒಬ್ಬರಾಗಿ ಹಾಜರಾಗಿದ್ದ ಮುಸ್ಲಿಂ ಸಮುದಾಯದ ಮುಖಂಡ ಇಬ್ರಾಹಿಂ ಸಾಬ ಶಿರವಾಳ ಬುಧವಾರ ರಾತ್ರಿ ಜೆಡಿಎಸ್ ಸೇರ್ಪಡೆಯಾಗಿರುವದು ಕ್ಷೇತ್ರದಲ್ಲಿ‌ ಅಚ್ಚರಿ‌ ಮೂಡಿಸಿದೆ.

Advertisement

ಮೂಲತಃ ಶಿರವಾಳದವರಾದ ಇಬ್ರಾಹಿಂಸಾಬ  ಶಿರವಾಳ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳರ ಆತ್ಮೀಯರಾಗಿದ್ದು, ಗುರು ಪಾಟೀಲರ ತಂದೆ ಅವರ ಕಾಲದಿಂದಲೂ ಅವರೊಂದಿಗೆ ಇದ್ದವರು, ಆದರೆ ಕಳೆದ ಚುನಾವಣೆಯಲ್ಲಿ‌ ಗುರು ಪಾಟೀಲರು ಬಿಜೆಪಿ ಯಿಂದ ಸ್ಪರ್ಧೆ ಮಾಡಿದಾಗ, ಕೆಲ ವಿಚಾರಗಳಿಗೆ ಹೊಂದಾಣಿಕೆ ಆಗದ ಹಿನ್ನೆಲೆ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಆದರೆ ಹಲವಾರು ಚುನಾವಣೆಯಲ್ಲಿ‌ ಶಿರವಾಳ ಮನೆತನದ ಪರವಾಗಿ ಇಬ್ರಾಹಿಂಸಾಬ ಕೆಲಸ ಮಾಡಿದವರಾಗಿದ್ದರು. ಬುಧವಾರ ಇಬ್ರಾಹಿಂಸಾಬ ಅವರು ಗುರು ಪಾಟೀಲ್ ನೇತೃತ್ವದಲ್ಲಿ ಮತ್ತೆ ವಾಪಸ್ ಆಗಿದ್ದು, ಚುನಾವಣೆ ನಗರದಲ್ಲಿ‌ ರಂಗೇರುತ್ತಿದೆ ಎನ್ನಬಹುದು.

ಜೆಡಿಎಸ್ ಸೇರ್ಪಡೆ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಲಾಲನಸಾಬ ಖುರೇಶಿ, ಶಂಕರಗೌಡ ಶಿರವಾಳ, ಮಲ್ಲಿಕಾರ್ಜುನ ಗಂಧದಮಠ, ಮೋನಪ್ಪ ಕಿಣ್ಣಿ, ನುಮಾನ್ ಖಾಜಿ, ಬಾಬಾ ಸೇರಿದಂತೆ ಪ್ರಮುಖರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next