Advertisement

ಶಹಾಪುರ: ರಸ್ತೆ ಅಪಘಾತದಲ್ಲಿ ಮಗ ಸಾವು; ವಿಷಯ ತಿಳಿದು ತಂದೆ ಆತ್ಮಹತ್ಯೆ

11:28 AM Mar 04, 2023 | Team Udayavani |

ಶಹಾಪುರ: ಬೈಕ್‌ – ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಮದ್ರಿಕಿ ಬಳಿ‌ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಮಾ.3 ರಂದು ನಡೆದಿದೆ.

Advertisement

ಶಿವಕುಮಾರ‌ ಸಮ್ಮಣಿ ಸಾ.ಮದ್ರಿಕಿ (24) ಮೃತಪಟ್ಟ ಬೈಕ್ ಸವಾರ.

ಈತ ನಿನ್ನೆ ರಾತ್ರಿ ಬೈಕ್‌ ನಲ್ಲಿ ಶಹಾಪುರದಿಂದ ತನ್ನೂರಿಗೆ ಹೋಗುತ್ತಿದ್ದ ಸಂದರ್ಭ ಕಬ್ಬು ತುಂಬಿದ ಟ್ರ್ಯಾಕ್ಟರ್ ಗೆ ಹೊಡೆದಿದೆ ಎನ್ನಲಾಗಿದೆ.

ಅಪಘಾತದ ವಿಷಯ ತಿಳಿಯುತ್ತಿದಂತೆ ಮೃತ ಯುವಕನ ತಂದೆ ಬಸವರಾಜ ಸಮ್ಮಣಿ (52) ಎಂಬವರು ಕೂಡಾ ಇಂದು ಮುಂಜಾನೆ ಗ್ರಾಮದ ಬಾವಿಯೊಂದಕ್ಕೆ ಹಾರಿ ಮೃತಪಟ್ಟಿದ್ದಾರೆ.

ಅಪಘಾತದ ಕುರಿತು ಭೀಮರಾಯನ ಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next