Advertisement

ಕೊರೊನಾ ಚಿಂತೆ ಬೇಡ

05:41 PM Mar 09, 2020 | Naveen |

ಶಹಾಪುರ: ನಾಗರಿಕರಲ್ಲಿ ಆತಂಕ ಮೂಡಿಸಿರುವ ಕೊರೊನಾ ವೈರಸ್‌ ಬಗ್ಗೆ ಭಯ ಭೀತಿಯಲ್ಲಿ ಮುಳುಗಿ ಚಿಂತೆಗೀಡಾಗುವುದನ್ನು ಬಿಟ್ಟು, ಬಂದ ಸಮಸ್ಯೆ ಎದುರಿಸುವ ಚಿಂತನೆ ಕೈಗೊಂಡು ವೈರಸ್‌ ಬಾರದಂತೆ ಎಚ್ಚರಿಕೆ ವಹಿಸಬೇಕೆಂದು ನಾಗರಿಕ ಹೋರಾಟ ಸಮಿತಿ ಮುಖಂಡ ಗುರು ಕಾಮಾ ತಿಳಿಸಿದರು.

Advertisement

ನಗರದ ಬಸವೇಶ್ವರ ವೃತ್ತದಲ್ಲಿ ನಾಗರಿಕ ಹೋರಾಟ ಸಮಿತಿ ಕೈಗೊಂಡ ಸಾರ್ವಜನಿಕರಲ್ಲಿ ಕೊರೊನಾ ಕುರಿತು ಜಾಗೃತಿ ಮತ್ತು ಮಾಸ್ಕ್ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಹಲವಡೆ ಕೆಲವರಲ್ಲಿ ಶಂಕಿತ ವೈರಾಣು ಇದೆ ಎಂಬ ಸುದ್ದಿ ಹರಡಿದೆ. ಆದರೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹೇಳಿಕೆ ಪ್ರಕಾರ ಯಾವುದೇ ಕೊರೊನಾ ವೈರಸ್‌ ಇದುವರೆಗೂ ಪಾಸಿಟಿವ್‌ ಕಂಡು ಬಂದಿಲ್ಲ. ಅನ್ಯ ದೇಶಗಳಲ್ಲಿ ತೀವ್ರತೆ ಪಡೆದುಕೊಂಡ ಕೊರೊನಾ ವೈರಸ್‌ ತಲ್ಲಣ ಮೂಡಿಸಿದೆ ಎಂದರು.

ಟಿಎಚ್‌ಒ ಡಾ| ರಮೇಶ ಗುತ್ತೇದಾರ, ಡಾ| ಮಲ್ಲಪ್ಪ, ನಗರಸಭೆ ಆಯುಕ್ತ ಬಸವರಾಜ ಶಿವಪೂಜೆ, ತಹಶೀಲ್ದಾರ್‌ ಜಗನ್ನಾಥ ರಡ್ಡಿ,
ಅಮಾತೆಪ್ಪ, ರಜಾಕ್‌, ಶೇಖ ಖಲಿಂ, ಸಾಯಬಣ್ಣ, ಬಸ್ಸು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next