Advertisement

Shedimane: ಮೊಮ್ಮಗಳಿಂದ ಅಜ್ಜಿಗೆ ಮೋಸ: ದೂರು ದಾಖಲು

11:23 PM Dec 12, 2023 | Team Udayavani |

ಸಿದ್ದಾಪುರ: ಹೆಬ್ರಿ ತಾಲೂಕು ಶೇಡಿಮನೆ ಗ್ರಾಮದ ಸರ್ವೆ ನಂ. 20-02ರಲ್ಲಿ ಮತ್ತು 20-03ರಲ್ಲಿ 2.31 ಎಕ್ರೆ ಸ್ಥಿರಾಸ್ತಿಯನ್ನು ಮೊಮ್ಮಗಳು ಚಂದನಾ ಸಿ., ಅಕ್ರಮವಾಗಿ ಸಹಿ ಮತ್ತು ಹೆಬ್ಬೆಟ್ಟನ್ನು ಪಡೆದು ವ್ಯವಸ್ಥಾಪನ ಪತ್ರ ಮಾಡಿಕೊಂಡಿದ್ದಾರೆ ಎಂದು ಶೇಡಿಮನೆ ಭಾಗೀರತಿ ಅಮ್ಮ (84) ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಭಾಗೀರತಿ ಅಮ್ಮ ಅವರ ಮಗ ಗೋಪಾಲಕೃಷ್ಣ ಅವರು ತೀರಿಕೊಂಡಿ ದ್ದರು. ಗೋಪಾಲಕೃಷ್ಣ ಅವರ ಮರಣ ಪ್ರಮಾಣಪತ್ರ ಮಾಡಿಸಲು ಅಜ್ಜಿಯ ಸಹಿ ಮತ್ತು ಹೆಬ್ಬೆಟ್ಟಿನ ಗುರುತು ಬೇಕು ಎಂದು ಮೊಮ್ಮಗಳು ಚಂದನಾ ಸಿ., ಸುಳ್ಳು ಹೇಳಿ ರಂಜಿತ್‌, ಸತ್ಯನಾರಾಯಣ, ಎಚ್‌. ಚಂದ್ರಶೇಖರ ಅವರನ್ನು ಜತೆಯಲ್ಲಿ ಸೇರಿಕೊಂಡು ನ. 24ರಂದು ಶಂಕರನಾರಾಯಣ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಭಾಗೀರತಿ ಅಮ್ಮ ಅವರ ಸಹಿ ಮತ್ತು ಹೆಬ್ಬೆಟ್ಟಿನ ಗುರುತು ಹಾಕಿಸಿಕೊಂಡಿದ್ದರು. ಅನಂತರ ಜಾಗವನ್ನು ಚಂದನಾ ಸಿ., ತನ್ನ ಹೆಸರಿನಲ್ಲಿ ವ್ಯವಸ್ಥಾಪನ ಪತ್ರ ಮಾಡಿಸಿಕೊಂಡಿದ್ದಾರೆ ಎಂದು ಭಾಗೀರತಿ ಅಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next