Advertisement

ಮಂತ್ರಾಲಯದಲ್ಲಿ ಭಕ್ತರಿಗೆ ನೆರಳಿನ ವ್ಯವಸ್ಥೆ

11:11 PM Apr 08, 2024 | Team Udayavani |

ರಾಯಚೂರು: ಎಲ್ಲೆಡೆ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಭಕ್ತರಿಗೆ ಬಿದಿರಿನ ತಟ್ಟೆಗಳನ್ನು ಅಳವಡಿಸಲಾಗಿದೆ.

Advertisement

ಆಂಧ್ರದ ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳಿಗೆ ನಿರ್ದೇಶನ ಬಂದಿದ್ದು, ಭಕ್ತರಿಗೆ ನೀರು, ನೆರಳಿನ ವ್ಯವಸ್ಥೆ ಮಾಡಲು ತಿಳಿಸಲಾಗಿದೆ. ಈ ಕಾರಣಕ್ಕೆ ಮಠದ ಮುಂದಿನ ಕಾರಿಡಾರ್‌ನಲ್ಲಿ ವೈಟ್‌ ಪೇಂಟ್‌ ಮಾಡಿಸುವುದರ ಜತೆಗೆ ಬಿದಿರಿನ ತಟ್ಟೆಗಳನ್ನು ಅಳವಡಿಸುವ ಮೂಲಕ ನೆರಳಿನ ವ್ಯವಸ್ಥೆ ಮಾಡಲಾಗಿದೆ.

ಮಠದ ಮುಂಭಾಗ ಮಾತ್ರವಲ್ಲದೇ ವಸತಿ ನಿಲಯಗಳು, ನದಿ ತೀರದಲ್ಲೂ ಈ ರೀತಿ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಸಾಲು ಸಾಲು ರಜೆಗಳಿರುವ ಕಾರಣ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದ್ದು, ಅವರಿಗಾಗಿ ಈ ವ್ಯವಸ್ಥೆ ಮಾಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next