Advertisement

ವಿಸ್ತೃತ ಪೀಠಕ್ಕೆ ಕಾನೂನಾತ್ಮಕ ಅಂಶಗಳನ್ನು ವಹಿಸಲು ಸಾಧ್ಯವಿದೆ: ಸುಪ್ರೀಂಕೋರ್ಟ್‌

09:58 AM Feb 11, 2020 | Team Udayavani |

ನವದೆಹಲಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ಐವರು ನ್ಯಾಯಮೂರ್ತಿಗಳ ಪೀಠ ಮಂಡಿಸಿದ್ದ ಕಾನೂನಾತ್ಮಕ ಅಂಶಗಳ ಪ್ರಶ್ನೆಗಳನ್ನು ವಿಸ್ತೃತ ಪೀಠಕ್ಕೆ ವಹಿಸಲು ಸಾಧ್ಯವಿದೆ ಎಂದು ಸೋಮವಾರ ನ್ಯಾಯಪೀಠ ಹೇಳಿದೆ.

Advertisement

ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬೆx ನೇತೃತ್ವದ ನ್ಯಾಯಪೀಠ ಒಟ್ಟು ಏಳು ಪ್ರಶ್ನೆಗಳನ್ನು ವಿಸ್ತೃತ ನ್ಯಾಯಪೀಠದ ವ್ಯಾಪ್ತಿಗಾಗಿ ರಚನೆ ಮಾಡಿದೆ.

ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿ, ಧಾರ್ಮಿಕ ಸ್ವಾತಂತ್ರ್ಯ ಮತ್ತು ನಂಬಿಕೆಗಳನ್ನು ಹೊಂದಿರುವ ಸ್ವಾತಂತ್ರ್ಯ ಪರಸ್ಪರ ಯಾವ ರೀತಿ ಸಂಬಂಧ ಹೊಂದಿವೆ ಎಂಬ ವಿಚಾರಗಳು ಕೂಡ ನ್ಯಾಯಪೀಠ ರಚಿಸಿದ್ದ ಪ್ರಶ್ನೆಗಳಲ್ಲಿ ಸೇರಿದೆ. ಸಂವಿಧಾನದ 25(2)(ಬಿ) ವಿಧಿಯಲ್ಲಿ ಪ್ರಸ್ತಾಪ ಮಾಡಿರುವಂತೆ “ಹಿಂದೂ ಸಮುದಾಯದ ಒಂದು ವರ್ಗ’ ಹೊಂದಿರುವ ಧಾರ್ಮಿಕ ಆಚರಣೆಗಳ ಬಗ್ಗೆ ಕೂಡ ವಿಸ್ತೃತ ನ್ಯಾಯಪೀಠ ಚರ್ಚೆ ನಡೆಸಲಿದೆ. ಜತೆಗೆ ಫೆ.17ರಿಂದ ದಿನವಹಿ ವಿಚಾರಣೆ ನಡೆಸುವುದರ ಬಗ್ಗೆ ಕೂಡ ಸುಪ್ರೀಂಕೋರ್ಟ್‌ ಸಲಹೆ ನೀಡಿದೆ. ಈ ವಿಚಾರಕ್ಕೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಟರ್‌ ಜನರಲ್‌ ತುಷಾರ್‌ ಮೆಹ್ತಾ ಸಮ್ಮತಿ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next