Advertisement

ಶಬರಿಮಲೆಯ ಮಂಡಲ, ಮಕರ ಉತ್ಸವ: ಭಕ್ತರಿಗೆ ಮುಕ್ತ ಪ್ರವೇಶ

09:56 AM Oct 15, 2022 | Team Udayavani |

ಕುಂಬಳೆ : ಶಬರಿಮಲೆಯಲ್ಲಿ ಈ ವರ್ಷ ಮಂಡಲ, ಮಕರ ಉತ್ಸವದ ವೇಳೆ ಭಕ್ತರಿಗೆ ಯಾವುದೇ ನಿಯಂತ್ರಣವಿಲ್ಲದೆ ಪ್ರವೇಶ ನೀಡಲಾಗುವುದೆಂದು ಪತ್ತನಂತಿಟ್ಟ ಜಿಲ್ಲಾಧಿಕಾರಿ ಡಾ|ದಿವ್ಯಾ ಎಸ್‌. ಅಯ್ಯರ್‌ ಹೇಳಿದ್ದಾರೆ.

Advertisement

ಶಬರಿಮಲೆ ಉತ್ಸವಕ್ಕೆ ಸಂಬಂಧಿಸಿದಂತೆ ಪತ್ತನಂತಿಟ್ಟ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿವಿಧ ಇಲಾಖೆಯ ಪ್ರಮುಖರ ಅವಲೋಕನ ಸಭೆಯಲ್ಲಿ ಅವರು ಈ ವಿಷಯ ಹೇಳಿದರು. ಈ ವರ್ಷ ಅಧಿಕ ಸಂಖ್ಯೆಯಲ್ಲಿ ಅಯ್ಯಪ್ಪ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ನಿಲಯ್ಕಲ್‌, ಪಂಪಾ, ಸನ್ನಿಧಾನ ಎಂಬೆಡೆಗಳಲ್ಲಿನ ಶೌಚಾಲಯ ಕಾಂಪ್ಲೆಕ್ಸ್‌ ತೆರೆಯಬೇಕು.

ಪಂಪಾ ತ್ರಿವೇಣಿಯಲ್ಲಿ ಅಪಘಾತ ಉಂಟಾಗದಂತೆ ಬಾರಿಕೇಡ್‌ ಸ್ಥಾಪಿಸಬೇಕು. ನಿಲಯ್ಕಲ್‌ ಸಹಿತ 12 ಕಡೆ ವೆರ್ಚುವಲ್‌ ಕ್ಯೂ, ಮುಂಗಡ ಬುಕ್ಕಿಂಗ್‌ ಸೌಲಭ್ಯ ಇರಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.

ಇದನ್ನೂ ಓದಿ : ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿ : ಮಾಜಿ ಮುಖ್ಯ ನ್ಯಾಯಮೂರ್ತಿಯ ಗುಂಡಿಕ್ಕಿ ಹತ್ಯೆ

Advertisement

Udayavani is now on Telegram. Click here to join our channel and stay updated with the latest news.

Next