Advertisement

ಶಬರಿಮಲೆಗೆ ತೆರಳಿದ ಅಯ್ಯಪ್ಪ ಭಕ್ತ ಹೃದಯಾಘಾತದಿಂದ ನಿಧನ

08:58 PM Jan 11, 2023 | Team Udayavani |

ಕಾಸರಗೋಡು: ಶಬರಿಮಲೆ ತೀರ್ಥಾಟನೆಗೆ ತೆರಳುತ್ತಿದ್ದ ಕಾಸರಗೋಡು ಕೂಡ್ಲು ನಿವಾಸಿ ನವೀನ್‌(47) ಅವರು ಅಳುದಾ ಸಮೀಪ ಮುಕ್ಕುಳಿಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

Advertisement

ಕಾಸರಗೋಡು ಶ್ರೀ ಧರ್ಮಶಾಸ್ತಾ ಸೇವಾ ಸಂಘದ ಅಯ್ಯಪ್ಪ ಭಕ್ತರ ನೇತೃತ್ವದಲ್ಲಿರುವ 84 ಮಂದಿ ತಂಡದೊಂದಿಗೆ ನವೀನ್‌ ತೀರ್ಥಾಟನೆಗೆ ತೆರಳಿದ್ದರು. ಎರುಮೇಲಿಯ ವರೆಗೆ ಬಸ್‌ನಲ್ಲಿ ತೆರಳಿದ ಇವರು ಅಲ್ಲಿಂದ ಸನ್ನಿಧಾನಕ್ಕೆ ಕಾಲ್ನಡೆಯಾಗಿ ತೆರಳುತ್ತಿದ್ದಾಗ ಅಳುದಾ ಸಮೀಪದ ಮುಕ್ಕುಳಿಗೆ ತಲುಪಿದಾಗ ಹೃದಯಾಘಾತ ಸಂಭವಿಸಿದೆ.

ಕೋಟ್ಟಯಂ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಮೃತ ದೇಹವನ್ನು ಊರಿಗೆ ತರಲಾಗುವುದು.

ನವೀನ್‌ ಕಾಸರಗೋಡಿನಲ್ಲಿ ಎ.ಸಿ. ಹಾಗು ವಾಷಿಂಗ್‌ ವೆಶಿನ್‌ ಮೆಕಾನಿಕ್‌ ಆಗಿ ದುಡಿಯುತ್ತಿದ್ದರು. ಮೃತರು ತಾಯಿ ಕುಸುಮಲತಾ, ಪತ್ನಿ ವಿಶಾಲಾಕ್ಷಿ, ಮಕ್ಕಳಾದ ಶ್ರೀಲಕ್ಷ್ಮೀ, ವಿಘ್ನೇಶ್‌, ವೈಷ್ಣವಿ (ಮೂವರು ವಿದ್ಯಾರ್ಥಿಗಳು), ಸಹೋದರ ಸಹೋದರಿಯರಾದ ಶಕೀಲ, ಶೈಲ, ಶಾಲಿನಿ, ಸಂದೇಶ್‌ ಕುಮಾರ್‌ ಹಾಗು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next