Advertisement
ಕೊಳವೆಬಾವಿ ನೀರು ಸಿಗಲಿಲ್ಲನೀರಿನ ಕೊರತೆ ಸಮಸ್ಯೆಯನ್ನು ಜಿ.ಪಂ. ಗಮನಕ್ಕೆ ತಂದ ಕಾರಣ, ಕೊಳವೆಬಾವಿ ಕೊರೆಯಲು ಅನುಮತಿ ಸಿಕ್ಕಿತ್ತು. ಜಿ.ಪಂ. ವತಿಯಿಂದ ಕೆಲ ದಿನಗಳ ಹಿಂದೆ ಕೊಳವೆ ಬಾವಿ ಕೊರೆಯಲಾಗಿದ್ದು, 640 ಫೀಟ್ ಆಳಕ್ಕಿಳಿದರೂ ತೊಟ್ಟು ನೀರು ಸಿಗಲಿಲ್ಲ. ಹೀಗಾಗಿ ಕೊಳವೆ ಬಾವಿಯಲ್ಲಿ ನೀರು ಸಿಗುವ ನಿರೀಕ್ಷೆ ಕೈ ಕೊಟ್ಟಿದೆ. ಈ ಶಾಲೆ ಆಸುಪಾಸಿನಲ್ಲಿ ಜನವಸತಿ ಪ್ರದೇಶಗಳು ಇಲ್ಲದ ಕಾರಣ ಖಾಸಗಿ ವ್ಯವಸ್ಥೆ ಮೂಲಕ ನೀರು ಬಳಸುವ ಸ್ಥಿತಿಯೂ ಇಲ್ಲಿಲ್ಲ. ಹೀಗಾಗಿ ಇನ್ನೆರಡು ತಿಂಗಳು ನೀರಿಗೇನು ಮಾಡುವುದು ಎನ್ನುವ ಚಿಂತೆ ಶಾಲೆಯನ್ನು ಕಾಡಿದೆ.
ಶೌಚಾಲಯ ಬಳಕೆಗೆ ನೀರಿಲ್ಲದ ಕಾರಣ ಮಕ್ಕಳಿಗೆ ಬಯಲು ಶೌಚಾಲಯವೇ ಗತಿ ಎನ್ನುವಂತಾಗಿದೆ. ಕೆಲ ವರ್ಷಗಳಿಂದ ನೀರಿನ ಅಭಾವ ಉಂಟಾಗುತ್ತಿದ್ದು, ಸ್ಥಳೀಯಾಡಳಿತ, ಎಲ್ಲ ಸ್ತರದ ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ಆದರೆ ಸಮಸ್ಯೆ ಪರಿಹಾರ ಕಂಡಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಭವಿಷ್ಯವೂ ತೂಗುಯ್ನಾಲೆಯಲ್ಲಿದೆ. ಬಿಸಿಯೂಟಕ್ಕೂ ಕಾಡಿದೆ ಸಮಸ್ಯೆ
ದಿನಂಪ್ರತಿ 32 ವಿದ್ಯಾರ್ಥಿಗಳಿಗೆ ಬಿಸಿಯೂಟದ ಸೌಲಭ್ಯವಿದೆ. ಅಂಗನವಾಡಿ ಮಕ್ಕಳಿಗೂ ಊಟ ತಯಾರಿ ಆಗಬೇಕು. ಆದರೆ ನೀರಿಲ್ಲದ ಕಾರಣ ಅಡುಗೆ ಮಾಡುವುದು ಹೇಗೆ ಎನ್ನುವ ಸಮಸ್ಯೆ ಉಂಟಾಗಿದೆ. ಶಾಲಾ ಮಕ್ಕಳು ಮನೆಯಿಂದ ಬಾಟಲ್ ಬಳಸಿ ನೀರು ತರುತ್ತಾರೆ. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೂ ಪರ್ಯಾಯ ವ್ಯವಸ್ಥೆ ಇಲ್ಲದೆ ದಿನ ಕಳೆಯುವುದು ಹೇಗೆ ಎನ್ನುವಂತಾಗಿದೆ.
Related Articles
ಜನವರಿಯಿಂದಲೇ ನೀರಿನ ಸಮಸ್ಯೆ ಕಾಡಿದೆ. ಈಗಂತೂ ಬಾವಿ ಬತ್ತಿದೆ. ಕೊಳವೆಬಾವಿ ಕೈ ಕೊಟ್ಟಿದೆ. ವಿದ್ಯಾರ್ಥಿಗಳಿಗೆ ನೀರೊದಗಿಸುವು ಹೇಗೆ ಎನ್ನುವುದೇ ಚಿಂತೆಯಾಗಿದೆ. ಈ ಬಗ್ಗೆ ತಾಲೂಕು ಎಸ್ಡಿಎಂಸಿ ಮೂಲಕ ತಹಶೀಲ್ದಾರ್ ಅವರಿಗೆ ಶನಿವಾರ ಮನವಿ ಮಾಡಿದ್ದೇವೆ.
– ರಾಜೇಂದ್ರ ಜೈನ್
ಎಸ್ಡಿಎಂಸಿ ಸದಸ್ಯ
Advertisement
ಸ್ಪಂದನೆಯ ಭರವಸೆಸೇವಾಜೆ ಶಾಲೆಯ ಸಮಸ್ಯೆ ಬಗ್ಗೆ ಸ್ಥಳೀಯ ಎಸ್ಡಿಎಂಸಿ ಅವರ ವತಿಯಿಂದ ತಾಲೂಕು ಎಸ್ಡಿಎಂಸಿ ಒಕ್ಕೂಟದ ಮೂಲಕ ತಹಶೀಲ್ದಾರ್ ಗೆ ಮನವಿ ಮಾಡಿದ್ದೇವೆ. ಅವರು ಸ್ಪಂದಿಸುವ ಭರವಸೆ ನೀಡಿದ್ದಾರೆ.
– ಹಸೈನಾರ್ ಜಯನಗರ ಕಾರ್ಯದರ್ಶಿ,
ಎಸ್ಡಿಎಂಸಿ ತಾಲೂಕು ಒಕ್ಕೂಟ