Advertisement

ಅಧಿವೇಶನ: ಕಾಂಗ್ರೆಸ್‌ನಿಂದ ವಿಪ್‌ ಜಾರಿ

12:30 AM Feb 04, 2019 | Team Udayavani |

ಹೊಸದಿಲ್ಲಿ: ಸೋಮವಾರದಿಂದ ಒಂದು ವಾರ ಕಾಲ ಲೋಕಸಭೆಯಲ್ಲಿ ಎಲ್ಲ ಸದಸ್ಯರೂ ಕಡ್ಡಾಯವಾಗಿ ಹಾಜರಿರಬೇಕೆಂದು ಸೂಚಿಸಿ ಕಾಂಗ್ರೆಸ್‌ ತನ್ನ ಸದಸ್ಯರಿಗೆ ವಿಪ್‌ ಜಾರಿ ಮಾಡಿದೆ. ಈ ಅವಧಿಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಹಾಗೂ ಮಧ್ಯಾಂತರ ಬಜೆಟ್‌ ಬಗ್ಗೆ ಚರ್ಚೆ ನಡೆಯಲಿದೆ.

Advertisement

ಈ ವಾರ ಸೋಮವಾರದಿಂದ ಶುಕ್ರವಾರದವರೆಗೆ ಎಲ್ಲರೂ ಸಂಸತ್‌ನಲ್ಲಿ ಹಾಜರಿರಬೇಕು ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್‌ ಮುಖ್ಯ ವಿಪ್‌ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಳಗ್ಗೆ 11ರಿಂದ ಸದನ ಮುಂದೂಡಿಕೆ ಆಗುವವರೆಗೂ ಎಲ್ಲರೂ ಹಾಜರಿದ್ದು, ಪಕ್ಷದ ನಿಲುವನ್ನು ಬೆಂಬಲಿಸಬೇಕು. ಇದನ್ನು ಎಲ್ಲರೂ ತುರ್ತು ಅಗತ್ಯ ಎಂದು ಭಾವಿಸಬೇಕು ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next