Advertisement

Road Mishap: ಐಟಿಐ ಗೇಟ್‌ ಬಳಿ ಸರಣಿ ಅಪಘಾತ; ಬೈಕ್‌ ಸವಾರ ಬಲಿ, 5 ವಾಹನ ಜಖಂ

11:30 AM Sep 01, 2024 | Team Udayavani |

ಬೆಂಗಳೂರು: ಬಿಎಂಟಿಸಿ ಬಸ್‌ ಸರಣಿ ಅಪಘಾತ ಎಸಗಿದ ಪರಿಣಾಮ ರಸ್ತೆ ಬದಿ ನಿಂತಿದ್ದ ಬುಲೆಟ್‌ ಸವಾರ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಕೆಂಗೇರಿ ಸಂಚಾರ ಠಾಣೆ ವ್ಯಾಪ್ತಿಯ ಐಟಿಐ ಗೇಟ್‌ ಬಳಿ ನಡೆದಿದೆ.

Advertisement

ಮೈಸೂರು ಮೂಲದ ಮೃತ ಸುಪ್ರಿತ್‌ (33) ಮೃತ ಸವಾರ. ಮಾಲ್‌ ಆಫ್ ಏಷಿಯಾದಲ್ಲಿ ಕೆಲಸ ಮಾಡುತ್ತಿದ್ದ ಸುಪ್ರಿತ್‌, ಕೆಲ ವರ್ಷಗಳಿಂದ ಕೆ.ಆರ್‌. ಪುರದ ನಿಸರ್ಗ ಬಡಾವಣೆಯಲ್ಲಿ ಪತ್ನಿ ಮತ್ತು ಮಗಳೊಂದಿಗೆ ವಾಸವಾಗಿದ್ದರು.

ಸುಪ್ರಿತ್‌, ಶುಕ್ರವಾರ ರಾತ್ರಿ ರಾತ್ರಿ 9.45ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದು, ಹಳೇ ಮದ್ರಾಸ್‌ ರಸ್ತೆಯ ಐಟಿಐ ಗೇಟ್‌ ಮುಂಭಾಗದ ರಸ್ತೆ ಬದಿ ಬುಲೆಟ್‌ ನಿಲ್ಲಿಸಿಕೊಂಡು ನಿಂತಿದ್ದರು. ಅದೇ ವೇಳೆ ಬಿಎಂಟಿಸಿ ಬಸ್‌ ಚಾಲಕ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಎಂ.ಎಂ.ಟೆಂಪಲ್‌ ಕಡೆಯಿಂದ ಕೆ.ಆರ್‌.ಪುರ ಕಡೆಗೆ ಬಂದು, ನಿಂತಿದ್ದ ಸುಪ್ರಿತ್‌ ಬುಲೆಟ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಅಲ್ಲದೆ, ಅದೇ ರಸ್ತೆಯಲ್ಲಿ ನಿಂತಿದ್ದ ಟ್ಯಾಂಕರ್‌ ವಾಹನಕ್ಕೆ ಬುಲೆಟ್‌ ಸಮೇತ ಅಪ್ಪಳಿಸಿದೆ. ಪರಿಣಾಮ ತೀವ್ರವಾಗಿ ಗಾಯ ಗೊಂಡಿದ್ದ ಸುಪ್ರಿತ್‌ನನ್ನು ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಸುಪ್ರಿತ್‌ ಮೃತಪಟ್ಟಿದ್ದಾರೆ. ಚಾಲಕ ಬಸ್‌ ಬಿಟ್ಟು ಪರಾರಿಯಾಗಿದ್ದಾನೆ. ಅಲ್ಲದೆ, ಘಟನೆಯಲ್ಲಿ ಕಾಂಕ್ರಿಟ್‌ ಮಿಕ್ಸರ್‌ ಲಾರಿ, ಟ್ಯಾಂಕರ್‌, ಬುಲೆಟ್‌, ಒಂದು ಬಿಎಂಟಿಸಿ ಬಸ್‌ ಹಾಗೂ ವೋಲ್ವೋ ಬಸ್‌ ಕೂಡ ಹಾನಿಗೊಂಡಿವೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. ಕೆ.ಆರ್‌. ಪುರ ಸಂಚಾರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next