Advertisement

ಪಾಕ್‌ ಹಣವನ್ನು ಕಲ್ಲುತೂರಾಟಕ್ಕೆ ನೀಡುತ್ತಿದ್ದರು!

06:10 AM Jul 26, 2017 | Team Udayavani |

ನವದೆಹಲಿ: ಪ್ರತ್ಯೇಕತಾವಾದದ ಹೆಸರಿನಲ್ಲಿ ಹುರಿಯತ್‌ ಕಾನ್ಫರೆನ್ಸ್‌ ನಾಯಕರು ಕಾಶ್ಮೀರದಲ್ಲಿ ಅಸ್ಥಿರತೆ ಸೃಷ್ಟಿಸಲು ಕಲ್ಲುತೂರಾಟಗಾರರಿಗೆ ಪಾಕಿಸ್ತಾನದಿಂದ ಬಂದ ಹಣವನ್ನು ವಿತರಿಸುತ್ತಿದ್ದರು ಎಂದು ದೆಹಲಿ ಕೋರ್ಟ್‌ಗೆ ಎನ್‌ಐಎ ಮಾಹಿತಿ ನೀಡಿದೆ. ಇದಕ್ಕೆ ಖಚಿತ ಸಾಕ್ಷ್ಯಾಧಾರವಿದೆ ಎಂದಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಬಂಧಿತರಾದ ಹುರಿಯತ್‌ ನಾಯಕ ಗಿಲಾನಿ ಅವರ ಅಳಿಯ ಅಲ್ತಾಫ್ ಸೇರಿ 7 ಮಂದಿಯನ್ನು 10 ದಿನಗಳ ಕಾಲ ಎನ್‌ಐಎ ವಶಕ್ಕೆ ನೀಡಿ ಕೋರ್ಟ್‌ ಆದೇಶ ಹೊರಡಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next