Advertisement

ಪ್ರತ್ಯೇಕ ಘಟನೆ: ಇಬ್ಬರು ವೃದ್ದರು, ನೌಕರ ಸಾವು

10:28 AM Jun 17, 2022 | Team Udayavani |

ಬೆಂಗಳೂರು: ನಗರದ ಮೂರು ಪ್ರತ್ಯೇಕ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪ ಘಾತದಲ್ಲಿ ಬುಧವಾರ ರಾತ್ರಿ ಇಬ್ಬರು ವೃದ್ಧರು, ಖಾಸಗಿ ಕಂಪನಿ ಉದ್ಯೋಗಿ ಸೇರಿ ಮೂವರು ಮೃತಪಟ್ಟಿದ್ದಾರೆ.

Advertisement

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡು ತ್ತಿದ್ದ ನಾಗವಾರ ನಿವಾಸಿ ಸೋಮಶೇಖರ್‌ (24) ಎರಡು ದಿನಗಳ ಕಾಲ ರಜೆ ಪಡೆದುಕೊಂಡು ಸ್ನೇಹಿತರ ಭೇಟಿಗೆ ಹೊಸೂರು ಕಡೆ ಹೋಗಿದ್ದರು. ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ವಾಪಸ್‌ ಬರುವಾಗ ಉಲ್ಲಾಳ ಸೇತುವೆ ಸಮೀಪದಲ್ಲಿ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಮತ್ತೊಂದು ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದುಕೊಂಡಿದ್ದಾರೆ. ಬಳಿಕ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿ ದ್ದಾರೆ. ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರು ವೃದ್ಧರು ಸಾವು: ಬೆಟ್ಟಹಲಸೂರಿನ ಬಳಿ ಸಂಬಂಧಿಕರ ಮದುವೆಗೆ ಬಂದು ರಸ್ತೆ ದಾಟುವಾಗ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಕೋಲಾರ ಮೂಲದ ದಾಸಪ್ಪ ಎಂಬವರು ಮೃತಪಟ್ಟಿರುವ ಘಟನೆ ಚಿಕ್ಕಜಾಲ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬುಧವಾರ ರಾತ್ರಿ 9.3ರ ಸಮಾರಿಗೆ ಬಸ್‌ ನಿಲ್ದಾಣದಿಂದ ಏರ್‌ಪೋರ್ಟ್‌ ರಸ್ತೆಯಿಂದ ಬೆಟ್ಟಹಲಸೂರ ಕ್ರಾಸ್‌ ಕಡೆ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದುಕೊಂಡು ಹೋಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಸಂಬಂಧಿಕರ ಮನೆಗೆ ಬಂದು ನಡೆದುಕೊಂಡು ಹೋಗುವಾಗ ಆಟೋ ಡಿಕ್ಕಿ ಹೊಡೆದ ಪರಿಣಾಮ ಕಾಳೇನಅಗ್ರಹಾರ ನಿವಾಸಿ ಸಂದೇಗಪ್ಪ (69) ಎಂಬವರು ಮೃತಪಟ್ಟಿದ್ದಾರೆ.

Advertisement

ಬನ್ನೇರುಘಟ್ಟ ರಸ್ತೆಯ ಡೆಕಾಥ್ಲಾನ್‌ ಸಮೀಪದ ನಡೆದುಕೊಂಡು ಹೋಗುವಾಗ ವೇಗವಾಗಿ ಬಂದ ಅಟೋ ಹಿಂದಿನಿಂದ ಸಂದೇಗಪ್ಪಗೆ ಡಿಕ್ಕಿ ಹೊಡೆ ದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತ ಪಟ್ಟಿದ್ದಾರೆ. ಹುಳಿಮಾವು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next