Advertisement

ಸಿಯೋಲ್‌ ಶಾಂತಿ ಸಮ್ಮೇಳನದಲ್ಲಿ ಕನ್ನಡದಲ್ಲಿ ತರಳಬಾಳು ಶ್ರೀ ಹಸ್ತಾಕ್ಷರ

12:35 AM Feb 11, 2019 | |

ಸಿರಿಗೆರೆ: ವಿಶ್ವಸಂಸ್ಥೆಯ ಸಹವರ್ತಿ ಸಂಸ್ಥೆಯಾದ ಅಂತಾರಾಷ್ಟ್ರೀಯ ಶಾಂತಿ ಪ್ರತಿಷ್ಠಾನದ ಆಶ್ರಯದಲ್ಲಿ ದಕ್ಷಿಣ ಕೋರಿಯಾ ರಾಜಧಾನಿ ಸಿಯೋಲ್‌ನಲ್ಲಿ ನಡೆಯುತ್ತಿರುವ ವಿಶ್ವಶಾಂತಿ ಸಮ್ಮೇಳನದಲ್ಲಿ ಪಾಲ್ಗೊಂಡಿರುವ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕನ್ನಡದಲ್ಲಿ ಹಸ್ತಾಕ್ಷರ ದಾಖಲಿಸಿ ಭಾಷಾಪ್ರೇಮ ಮೆರೆದಿದ್ದಾರೆ.

Advertisement

ಸಿಯೋಲ್‌ನಲ್ಲಿ ‘ಅಂತಾರಾಷ್ಟ್ರೀಯ ಶಾಂತಿ-ಸುಭದ್ರತೆ ಮತ್ತು ಮಾನವ ಅಭಿವೃದ್ಧಿ’ ವಿಷಯ ಕುರಿತ ವಿಶ್ವ ಶಾಂತಿ ಸಮ್ಮೇಳನ ನಡೆಯುತ್ತಿದ್ದು, ಭಾನುವಾರ ಶಾಂತಿ ಪ್ರತಿಷ್ಠಾನದ ಸಂಸ್ಥಾಪನಾ ದಿನ ಆಚರಿಸಲಾಯಿತು.

ವಿಶ್ವದ ಎಲ್ಲ ದೇಶಗಳ ಜನರಿಗೆ ಶಾಂತಿಯುತ ಸಹಬಾಳ್ವೆ ನಡೆಸುವಂತೆ ಕರೆ ನೀಡಲು ತೀರ್ಮಾನಿಸಲಾಯಿತು. ಸಮ್ಮೇಳನದಲ್ಲಿ ಪಾಲ್ಗೊಂಡಿರುವ ಜಗತ್ತಿನ ವಿವಿಧ ದೇಶದ ಪ್ರತಿನಿಧಿಗಳು ತೀರ್ಮಾನ ಫಲಕದ ಮೇಲೆ ತಮ್ಮ ಹಸ್ತಾಕ್ಷರ ಹಾಕಿದರು. ಈ ವೇಳೆ ತರಳಬಾಳು ಜಗದ್ಗುರುಗಳು ಕನ್ನಡದಲ್ಲಿ ಹಸ್ತಾಕ್ಷರ ದಾಖಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next