Advertisement

ಹಿರಿಯ ನಿರ್ದೇಶಕ ಸಿ.ವಿ.ರಾಜೇಂದ್ರನ್‌ ನಿಧನ

07:10 AM Apr 02, 2018 | Team Udayavani |

ಬೆಂಗಳೂರು: ಕನ್ನಡ, ತಮಿಳು ಸೇರಿ ವಿವಿಧ ಭಾಷೆಗಳಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶಿಸಿರುವ ಹಿರಿಯ ನಿರ್ದೇಶಕ ಸಿ.ವಿ.ರಾಜೇಂದ್ರನ್‌ (81) ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

Advertisement

ಅನುಭವಂ ಪುದುಮೈ ಸಿನಿಮಾ ಮೂಲಕ ನಿರ್ದೇಶಕರಾದ ರಾಜೇಂದ್ರನ್‌ ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಡಾ.ರಾಜ್‌ಕುಮಾರ್‌ ಅವರತ್ರಿಮೂರ್ತಿಗಳು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಬಂದ ಸಿ.ವಿ.ರಾಜೇಂದ್ರನ್‌, ಆ ನಂತರ ದ್ವಾರಕೀಶ್‌ ನಿರ್ಮಾಣದಸಿಂಗಾಪುರದಲ್ಲಿ ರಾಜಾಕುಳ್ಳಕಿಟ್ಟು ಪುಟ್ಟುಗಲಾಟೆ ಸಂಸಾರನಾನೇ ರಾಜ ಪ್ರೀತಿ ಮಾಡು ತಮಾಷೆ ನೋಡು ಸೇರಿ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಸಿ.ವಿ.ರಾಜೇಂದ್ರನ್‌, ಪತ್ನಿ, ಪುತ್ರಿ, ಪುತ್ರರನ್ನು ಅಗಲಿದ್ದಾರೆ. ರಾಜೇಂದ್ರನ್‌ ಅಂತ್ಯ ಸಂಸ್ಕಾರ ಚೆನ್ನೈನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next